ರಾಯಚೂರು: ಸರ್ಕಾರವನ್ನು ಅಸ್ಥಿರಗೊಳಿಸುವ, ಕಾಲೆಳೆಯುವ ಬಿಜೆಪಿ ಶಾಸಕರ ಮನಸ್ಥಿತಿಯಿಂದ ಬೊಮ್ಮಾಯಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ಬೊಮ್ಮಾಯಿ ಸರ್ಕಾರಕ್ಕೆ ಮೊದಲ ದಿನವೇ ಗ್ರಹಣ ಹಿಡಿದಿದೆ ಅಂತ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.ರಾಯಚೂರಿನಲ್ಲಿ ಕಲಬುರಗಿ ವಿಭಾಗೀಯ ಕಾಂಗ್ರೆಸ್ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಆನಂದ ಸಿಂಗ್ ರಾಜೀನಾಮೆಯ ಧಮ್ಕಿ ಕೊಟ್ಟಿದ್ದಾರೆ. ರಾಜೀನಾಮೆ ಇಂದು ಕೊಡ್ತಾರೆ, ನಾಳೆ ಕೊಡುತ್ತಾರೆ ಎಂದು ವಿಚಾರಗಳು ಡೋಲಮಾನವಾಗಿವೆ. ಮಂತ್ರಿಗಳಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚಿಂತನೆಯಿಲ್ಲಾ. ಎಲ್ಲರ ಚಿಂತೆ, ಚಿಂತನೆ ಬಹಳ ದೊಡ್ಡ ಖಾತೆ, ಹಣ ಇರುವ ಖಾತೆ ಬೇಕಾಗಿತ್ತು ಅನ್ನೋದರ ಕಡೆಯಿದೆ ಎಂದರು. ಇದನ್ನೂ ಓದಿ:  ಅಫ್ಘಾನ್‍ನಲ್ಲಿ ಹಸುವಿನ ವೇಷ ತೊಟ್ಟ ತಾಲಿಬಾನ್ ರಾಕ್ಷಸರು – ಷರಿಯತ್ ಕಾನೂನು ಪಾಲಿಸಲು ಕಟ್ಟಪ್ಪಣೆರಾಜ್ಯದ ಅಭಿವೃದ್ಧಿ ಒಂದು ಅಂಶವಲ್ಲ ಅಂತ ಬೊಮ್ಮಾಯಿ ಸರ್ಕಾರ ನಿರ್ಣಯಿಸಿದಂತಿದೆ. ಇಂತಹ ಕೆಟ್ಟ ವಾತಾವರಣರಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಸರ್ಕಾರವಾಗುವುದಿಲ್ಲ. ಅಧಿಕಾರಕ್ಕೆ ಬಂದ ಮೊದಲ ಒಂದೆರಡು ದಿನ ಬೊಮ್ಮಾಯಿ ತೆಗೆದುಕೊಂಡ ನಿರ್ಧಾರಗಳು ನಮಗೂ ಮೆಚ್ಚಿಗೆ ಆಗಿದ್ದವು. ಆದರೆ ಸಚಿವ ಸ್ಥಾನದ ಅಸಮಧಾನಗಳು ಸರ್ಕಾರವನ್ನು ಹೆಚ್ಚು ದಿನ ಉಳಿಯದಂತೆ ಮಾಡುತ್ತವೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಆರೋಪ ಮಾಡಿದ್ದಾರೆ.Sign in to your account
Username or Email Address


Password

 Remember Me


