ರಾಯಚೂರು: ಮಾಜಿ ಪ್ರಧಾನಿ ವಾಜಪೇಯಿ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಮ್ಮ ನಾಯಕರು ಯಾರೂ ಸುಮ್ಮನೆ ಹೇಳಿಕೆಗಳನ್ನ ನೀಡಲ್ಲ. ಹುಕ್ಕಾ ಬಾರ್, ಅಫೀಮು ಬಗ್ಗೆ ವಾಜಪೇಯಿ ಅವರೇ ಹೇಳಿಕೊಂಡಿದ್ದಾರೆ. ಸ್ವತಃ ವಾಜಪೇಯಿ ಅವರು ಸಂದರ್ಶನವೊಂದರಲ್ಲಿ ಇತಿ-ಮಿತಿಯಲ್ಲಿ ಮಾದಕ ವಸ್ತು ತಗೋತಿದ್ದೆ ಅಂತ ತಾವೇ ಹೇಳಿದ್ದಾರೆ ಅಂತ ಈಶ್ವರ ಖಂಡ್ರೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ರಾಯಚೂರಿನಲ್ಲಿ ಮಾತನಾಡಿದ ಅವರು, ಸಿಟಿ ರವಿಗೆ ಯಾವ ಚರಿತ್ರೆ, ಇತಿಹಾಸ ಇದೆ. ನೆಹರು ಇಂದಿರಾಗಾಂಧಿ ತ್ಯಾಗ ಬಲಿದಾನಗಳ ಬಗ್ಗೆ ಇವರಿಗೆ ಏನು ಗೊತ್ತಿದೆ. ಸಿ.ಟಿ ರವಿ ಅವರ ಪಾದದ ಧೂಳಿಗೂ ಸಮನಾಗಿಲ್ಲ. ಅವರ ಸೇವೆಯಷ್ಟೂ ಸಿ.ಟಿ ರವಿಗೆ ವಯಸ್ಸಾಗಿಲ್ಲ. ಯಾರ ಬಗ್ಗೆ ಸುಮ್ಮನೆ ಹೇಳಿಕೆಗಳನ್ನ ನೀಡಬಾರದು ಜನರೇ ಇವರಿಗೆ ತಕ್ಕ ಪಾಠ ಕಲಿಸಿತ್ತಾರೆ. ಪ್ರಿಯಾಂಕ್ ಖರ್ಗೆ ಸಿ.ಟಿ ರವಿ ಹೇಳಿಕೆಗಳು ಹೋಲಿಕೆ ಮಾಡುವಂತವಲ್ಲ ಅಂತ ಖಂಡ್ರೆ ಹೇಳಿದ್ದಾರೆ.ಈ ರಾಜ್ಯದಲ್ಲಿರುವುದು ಅಸ್ಥಿರವಾದ ಸರ್ಕಾರ. ಬಹಳ ದಿನ ಉಳಿಯುವುದಿಲ್ಲ, ಮಧ್ಯಂತರ ಚುನಾವಣೆ ಬರಲಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. 40 ಸಾವಿರ ಖಾಲಿ ಹುದ್ದೆ ಭರ್ತಿಯಾಗದೆ ಹಾಗೇ ಉಳಿದಿವೆ. ಯುವಕರು ಉದ್ಯೋಗವಿಲ್ಲದೆ ಭ್ರಮನಿರಸವಾಗಿದ್ದಾರೆ ಎಂದರು. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆಎಂಟಿಬಿ ನಾಗರಾಜ್ ಹಾಗೂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಖಂಡ್ರೆ, ಅವರು ಮೊದಲು ನಮ್ಮ ಪಕ್ಷದಲ್ಲಿದ್ದವರು, ಮಂತ್ರಿಯಾಗಿದ್ದವರು ಹೀಗಾಗಿ ಭೇಟಿಯಾಗಿದ್ದಾರೆ. ಮುರುಗೇಶ್ ನಿರಾಣಿ ಸಹ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದರು. ಸುಮಾರು ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಅದೆಲ್ಲಾ ನಮ್ಮ ಪಕ್ಷದ ಹಿರಿಯರು ನೋಡಿಕೊಳ್ಳುತ್ತಿರುವ ವಿಚಾರ. ಮುಂದೆ ಎಲ್ಲವನ್ನೂ ನಮ್ಮ ಪಕ್ಷದ ಹಿರಿಯರೆ ಬಹಿರಂಗವಾಗಿ ತಿಳಿಸುತ್ತಾರೆ ಎಂದರು. ಇದನ್ನೂ ಓದಿ: ಟ್ವಿಟ್ಟರ್‌ ಖಾತೆ ಮತ್ತೆ ಸಕ್ರಿಯ – ಸತ್ಯಮೇವ ಜಯತೇ ಎಂದ ಕಾಂಗ್ರೆಸ್‌ಇನ್ನೂ ಆಗಸ್ಟ್ 17 ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಿರಿಯ ಮುಖಂಡರು ರಾಯಚೂರಿಗೆ ಆಗಮಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಮುಖಂಡರ ಸಭೆ ನಡೆಸಲಿದ್ದಾರೆ. ರಾಜ್ಯದ ಹಿರಿಯ ಮುಖಂಡರೆಲ್ಲಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಸರ್ಕಾರಗಳ ದುರಾಡಳಿತ ವಿರುದ್ದ ಧ್ವನಿ ಎತ್ತಿ ಜನರ ಪರ ಹೋರಾಟ ಮಾಡುತ್ತೇವೆ ಅಂತ ಈಶ್ವರ ಖಂಡ್ರೆ ಹೇಳಿದ್ದಾರೆ.Sign in to your account
Username or Email Address


Password

 Remember Me


