ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವುದಿಲ್ಲ (Bengaluru Rains) ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಇಳಿಕೆಯಾಗಲಿದೆ. ಹೀಗಾಗಿ ಮೇ 30 ರ ವರೆಗೆ ನಗರಕ್ಕೆ ಮಳೆಯಾಗುವುದಿಲ್ಲ. ಮೇ 31, ಜೂನ್ 1 ರ ಅವಧಿಯಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಇದನ್ನೂ ಓದಿ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ – ಸಿಐಡಿಗೆ ವರ್ಗಾವಣೆಜೂ‌ 1 ರ ಬಳಿಕ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ಇದೆ. ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಅಬ್ಬರಿಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮಾತ್ರ ರೆಮಲ್ ಆರ್ಭಟ ಜೋರಾಗಿರಲಿದೆ. ಆದರೆ ರಾಜ್ಯಕ್ಕೆ ರೆಮಲ್‌ ಚಂಡಮಾರುತದ ಭೀತಿ ಇಲ್ಲ. ತಮಿಳುನಾಡು ಮತ್ತು ಆಂಧ್ರ ಕರಾವಳಿ ಭಾಗದಿಂದ ಈ ಚಂಡಮಾರುತ ಭಾರೀ ದೂರ ಚಲಿಸಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯ, ಹಾಗೂ ದಕ್ಷಿಣ ಭಾರತಕ್ಕೆ ಚಂಡಮಾರುತದಿಂದ ಯಾವುದೇ ಪರಿಣಾಮ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದಸರಾ ಆನೆ ಅರ್ಜುನ ಸಮಾಧಿ ವಿಚಾರಕ್ಕೆ ದರ್ಶನ್ ಫ್ಯಾನ್ಸ್, ಅರಣ್ಯಾಧಿಕಾರಿಗಳ ಗಲಾಟೆಮುಂದಿನ ಮೂರ್ನಾಲ್ಕು ದಿ‌ನ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಅತ್ತ ಕೋಲ್ಕತಾ, ಹಿಮಾಚಲ ಪ್ರದೇಶಗಳಿಗೆ ಚಂಡಮಾರುತದ ಎಫೆಕ್ಟ್‌ ಸಾಧ್ಯತೆ ಹಿ‌ನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.Sign in to your account
Username or Email Address


Password

 Remember Me


