ಬೆಂಗಳೂರು: ಆಸ್ತಿ ತೆರಿಗೆ ಬೇಡಿಕೆ, ಬಿಬಿಎಂಪಿ ವಿಧಿಸಿರುವ ದಂಡ ವಿರೋಧಿಸಿ ಆಮ್ ಆದ್ಮಿ ಪಕ್ಷ ಆಯುಕ್ತರಿಗೆ ಪತ್ರ ಬರೆದಿದೆ.2020 ಮತ್ತು 2021ರ ಕೋವಿಡ್ ಬಿಕ್ಕಟ್ಟು ಮತ್ತು ಲಾಕ್‍ಡೌನ್‍ಗಳಿಂದಾಗಿ ನಾಗರಿಕರು ಅನೇಕ ಸಂಕಷ್ಟಗಳಿಗೆ ಒಳಾಗಿದ್ದಾರೆ. ಸತತ 15 ತಿಂಗಳು, ಉದ್ಯೋಗವನ್ನು ಕಳೆದುಕೊಂಡು ಆದಾಯವಿಲ್ಲದೆ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳು ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತರ ದೇಶಗಳಲ್ಲಿನ ಸರ್ಕಾರಗಳು ಆಸ್ತಿ ತೆರಿಗೆಗಳಲ್ಲಿ ವಿನಾಯಿತಿ ನೀಡಿ, ಹಣಕಾಸಿನ ನೆರವು ನೀಡುವ ಮೂಲಕ ಬದುಕಿನ ಭದ್ರತೆ ನೀಡಿವೆ. ನಮ್ಮ ದೇಶದಲ್ಲಿ ಸರ್ಕಾರ ನಾಗರಿಕರ ಬಗ್ಗೆ ಸರ್ಕಾರ ಕಾಳಜಿ ತೋರಿಸುತ್ತಿಲ್ಲ. ಸೋಂಕಿತರು ಆಸ್ಪತ್ರೆ ವೆಚ್ಚವನ್ನು ಭರಿಸಲು ತಮ್ಮ ಉಳಿತಾಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.ಇಂತಹ ಸಂದಿಗ್ಧತೆಯ ಸಮಯದಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಬೇಡಿಕೆ ನೋಟಿಸ್ ಕಳುಹಿಸುವ ಮೂಲಕ ಮತ್ತು ಹೆಚ್ಚುವರಿಯಾಗಿ ದಂಡ ವಿಧಿಸುವ ಮೂಲಕ ಜನತೆಗೆ ಆಘಾತಕಾರಿ ಶಾಕ್ ನೀಡಿದೆ.ಬೆಂಗಳೂರಿನ ಹಲವು ನಿವಾಸಿಗಳು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರ ಜೊತೆಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಎಸ್‍ಎಎಸ್ ಯೋಜನೆಯಡಿ ಶ್ರದ್ಧೆಯಿಂದ ತೆರಿಗೆ ಪಾವತಿಸುವ ನಿವಾಸಿಗಳಿಗೆ ಕೂಡ ಈ ದಂಡ ಸಹಿತ ತೆರಿಗೆ ಬಡ್ಡಿ ಪಾವತಿಸಲು ನೋಟಿಸ್‍ಗಳನ್ನು ನೀಡಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಏಕೆಂದರೆ ವಲಯ ಮರು ವರ್ಗೀಕರಣದ ಆಧಾರದ ಮೇಲೆ ಅನ್ವಯವಾಗುವ ದರಗಳ ಪ್ರಕಾರ ಅವರು ಆಸ್ತಿ ತೆರಿಗೆಯನ್ನು ಪಾವತಿಸಲಿಲ್ಲ ಎಂಬ ಕಾರಣಕ್ಕೆ.ಈ ಕಾರಣಗಳಿಗಾಗಿ ನೋಟಿಸ್ ಹಿಂಪಡೆಯುವಂತೆ ಆಪ್ ಆಗ್ರಹ 
1. ಕೋವಿಡ್ ಸಂದರ್ಭದಲ್ಲಿ ಈ ರೀತಿ ದಂಡ ವಿಧಿಸುವುದು ನಾಗರಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ತಳೆದಿರುವ ಬೇಜವಾಬ್ದಾರಿಯುತ ಅಸಡ್ಡೆ ತೋರಿಸುತ್ತದೆ.
2. ನೀವು ನಾಗರಿಕರ ಸ್ಥಿತಿಯನ್ನು ನಿರ್ಲಕ್ಷಿಸುತ್ತಿದ್ದೀರಿ ಮತ್ತು ಈ ದಂಡವನ್ನು ಪಾವತಿಸಲು ಒತ್ತಾಯಿಸುತ್ತಿದ್ದೀರಿ. ವಿಪರ್ಯಾಸ ಎಂದರೆ ಪ್ರಾಮಾಣಿಕ ತೆರಿಗೆ ಪಾವತಿಸುವ ನಾಗರಿಕರ ಮೇಲೆ ಕೂಡ ದಂಡ ವಿಧಿಸಲಾಗಿದೆ.
3. ತಂತ್ರಜ್ಞಾನ ಮತ್ತು ಜಿಪಿಎಸ್ ಮ್ಯಾಪಿಂಗ್ ಯುಗದಲ್ಲಿ, ಜಿಪಿಎಸ್ ಬಳಸಿ ವಲಯ ವರ್ಗೀಕರಣ ಮತ್ತು ಮರು ವರ್ಗೀಕರಣವನ್ನು ಖಾತ್ರಿಪಡಿಸುವ ಹಲವು ವೇಗದ ಮತ್ತು ತಾಂತ್ರಿಕವಾಗಿ ಮುಂದುವರಿದ ಮಾರ್ಗಗಳಿವೆ. ಹೀಗಿರುವಾಗ ಕಟ್ಟಡದ ಗಾತ್ರಗಳನ್ನು ಪರಿಶೀಲಿಸಲು ತಂತ್ರಜ್ಞಾನವನ್ನು ಬಳಸಬೇಕು.
4. ಬೆಸ್ಕಾಂ ಮತ್ತು ಇತರ ಯುಟಿಲಿಟಿ ಬಿಲ್ ಗಳನ್ನು ಲಿಂಕ್ ಮಾಡುವುದರಿಂದ ವಾಣಿಜ್ಯ/ವಸತಿ ಬಳಕೆಗಳ ಬಗ್ಗೆ ಸ್ಪಷ್ಟತೆ ನೀಡಬೇಕು.
5. ವಲಯಗಳ ವರ್ಗೀಕರಣದಲ್ಲಿ ಪಾರದರ್ಶಕತೆಯ ಕೊರತೆಯಿದೆ, ಸರಳ ಮಧ್ಯಮ ವರ್ಗದ ನಿವಾಸಿಗಳು ತಮ್ಮ ವಸತಿ ವಲಯಗಳನ್ನು ನಿಖರವಾಗಿ ನಿರ್ಣಯಿಸಲು ಅಸಾಧ್ಯ.ಆದ್ದರಿಂದ, ಬಿಬಿಎಂಪಿಯಿಂದ ನೀಡಲಾದ ತೆರಿಗೆ ಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ನಾನು ಒತ್ತಾಯಿಸುತ್ತಿದ್ದೇವೆ. ಮತ್ತು ವಸತಿ ಆಸ್ತಿ ಮಾಲೀಕರಿಗೆ 6 ತಿಂಗಳು ಹೆಚ್ಚುವರಿ ಸಮಯವನ್ನು ಮತ್ತು ವಾಣಿಜ್ಯ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ವ್ಯತ್ಯಾಸವನ್ನು ಪಾವತಿಸಲು 3 ತಿಂಗಳು ಹೆಚ್ಚುವರಿ ಸಮಯವನ್ನು ಒದಗಿಸಬೇಕು ಹಾಗೂ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಎಎಪಿ ಆಗ್ರಹಿಸಿದೆ. ಇದನ್ನೂ ಓದಿ:ಮಾಸ್ಕ್ ಧರಿಸದೇ ಜನರ ಓಡಾಟ- ದಾಂಡೇಲಿಯಲ್ಲಿ 1,02,800 ರೂ. ದಂಡ ವಸೂಲಿಈ ಸೂಚನೆಯನ್ನು ಹಿಂಪಡೆಯದಿದ್ದರೆ ಎಎಪಿ ನಾಯಕರು ಮತ್ತು ಕಾರ್ಯಕರ್ತರು ಸರ್ಕಾರದ ಈ ಕಠಿಣ ನೀತಿಯ ವಿರುದ್ಧ ಅನಿರ್ದಿಷ್ಟ ಮುಷ್ಕರ ನಡೆಸುತ್ತೆವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿಯೇ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿರುವ ಬಸ್, ಕಾರ್, ಟ್ರಕ್Sign in to your account
Username or Email Address


Password

 Remember Me


