ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಫಿನಾಲೆ ವೇದಿಕೆಗೆ ಗಾಯಕ ರಘು ದೀಕ್ಷಿತ್ ಹಾಗೂ ರಾಜೇಶ್ ಕೃಷ್ಣನ್ ಎಂಟ್ರಿ ಕೊಡುವ ಮೂಲಕ ಸುದೀಪ್‍ಗೆ ಸರ್ಪ್ರೈಸ್ ನೀಡಿದ್ದಾರೆ.ವೇದಿಕೆ ಮೇಲೆ ಬಂದು ಸುದೀಪ್‍ರನ್ನು ಭೇಟಿ ಮಾಡಿದ ರಘು ದೀಕ್ಷಿತ್, ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಮ್ಯೂಸಿಕ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಳಿಕ ಇದೇ ಮೊದಲ ಬಾರಿಗೆ ಗಾಯಕ ರಾಜೇಶ್ ಕೃಷ್ಣನ್‍ರವರು ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.ಈ ವೇಳೆ ರಘು ದೀಕ್ಷಿತ್, ನಾನು ಯಾವುದಾರೂ ಮ್ಯೂಸಿಕ್ ಕಂಪೋಸ್ ಮಾಡಲು ಹೋದರೆ, ಜನ ನನಗೆ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ರೀತಿ ಮ್ಯೂಸಿಕ್ ನೀಡಿ ಎಂದು ಹೇಳುತ್ತಾರೆ. ಆದರೆ ನನಗೆ ಮತ್ತೆ ಆ ರೀತಿ ಮ್ಯೂಸಿಕ್ ನೀಡಲು ಸಾಧ್ಯವಿಲ್ಲ. ನಾನು ಮ್ಯೂಸಿಕ್ ನೀಡಿದ ಸೈಕೋ ಸಿನಿಮಾ ಇನ್ನೂ ತೆರೆ ಕಂಡಿರಲಿಲ್ಲ. ಆಗ ಯಾವುದೋ ರೇಡಿಯೋ ಜಿಂಗಲ್‍ನನ್ನು ಕೇಳಿ ವಿನಾಯಕ್ ಜೋಶಿಗೆ ಕರೆ ಮಾಡಿ ಸುದೀಪ್‍ರವರು ನಂಬರ್ ತೆಗೆದುಕೊಂಡು ಸ್ಕ್ರಿಪ್ಟ್ ನೀಡಿ ಏನಾದರೂ ಮಾಡು ಎಂದು ಹೇಳಿ ಅವಕಾಶ ನೀಡಿದರು ಎಂದು ಹೇಳುತ್ತಾ, ಮೊದಲ ಬಾರಿಗೆ ಸುದೀಪ್‍ಗೆ ಸಾಂಗ್ ಕಂಪೋಸ್ ಮಾಡಿದ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಹಾಡಿದ್ದಾರೆ.ಸುಮಾರು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಸುದೀಪ್ ನಾನು ಸ್ನೇಹಿತರು ಆ ಸ್ನೇಹದ ಪ್ರತಿಕವಾಗಿ ಸುದೀಪ್ ಎಷ್ಟೋ ಹಾಡುಗಳನ್ನು ನನಗೆ ನೀಡಿದ್ದಾರೆ. ನನ್ನ ಮೇಲೆ ವಿಶ್ವಾಸ ಇಟ್ಟು, ನನ್ನ ಧ್ವನಿ ಹಾಗೂ ಎಕ್ಸ್ ಪ್ರೆಶನ್‍ನ್ನು ತುಂಬಾ ಇಷ್ಟಪಟ್ಟು, ಒಂದಷ್ಟು ಮುತ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಎರಡು ಹಾಡುಗಳನ್ನು ಹಾಡುತ್ತೇನೆ ಎಂದು ಚಂದು ಹಾಗೂ ಪಾರ್ಥ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ.ನಾನು ಸುದೀಪ್‍ಗೆ ದೊಡ್ಡ ಬಿಗ್ ಫ್ಯಾನ್. ನಿನ್ನ ಈಗ ಸಿನಿಮಾವನ್ನು ಯಾವ ಭಾಷೆಯಲ್ಲಿ ಬಂದರೂ ನಾನು ನೋಡುತ್ತಲೆ ಇರುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಬಿಗ್‍ಬಾಸ್ ವೇದಿಕೆಯಲ್ಲಿ ಬರೀ ಡ್ಯಾನ್ಸ್ ಮಾತ್ರವಲ್ಲದೇ ಸಂಗೀತ ರಸಮಂಜರಿಯನ್ನು ಕೂಡ ಏರ್ಪಡಿಸುವ ಮೂಲಕ ಸ್ಪರ್ಧೀಗಳಿಗೆ ಮನರಂಜನೆಯನ್ನು ನೀಡಲಾಯಿತು. ಇದನ್ನೂ ಓದಿ:ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?






 Advertisement 




Sign in to your account
Username or Email Address


Password

 Remember Me


