ಹಾಸನ: ಯಡಿಯೂರಪ್ಪ ಯಾವತ್ತೂ ಸೋಲಲ್ಲ. ಏನಾದರೂ ಅವರು ಸೋತಿದ್ದರೆ ಅದು ಮುಂದಿನ ಗೆಲುವಿಗಾಗಿ ಅಂತ ಶಾಸಕ ಪ್ರೀತಮ್ ಗೌಡ ತಿಳಿಸಿದ್ದಾರೆ.ಹಾಸನದಲ್ಲಿ ಪ್ರಾರಂಭವಾದ ಫುಡ್ ಕೋರ್ಟ್ ಉದ್ಘಾಟನಾ ಸಮಾರಂಭದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಟ್ಟ ಕಡೆಯ ತನಕ ಬದಲಾವಣೆ ಆಗಲ್ಲ ಅಂತ ಬಹುಶಃ ನಾನೊಬ್ಬನೇ ವಾದ ಮಾಡಿದೆ. ಆದರೆ ಈಗಲೂ ಬದಲಾಗಿದ್ದಾರೆ ಅಂದ್ರೆ ನನಗೆ ನಂಬಲು ಅಸಾಧ್ಯ. ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರದಲ್ಲಿ ಇರಬಾರದು ಎಂಬುದು ಮೋದಿ ನಿರ್ಧಾರ. ಹಾಗಾಗಿ ಯಡಿಯೂರಪ್ಪನವರೇ ಸ್ವತಃ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಯಾರ ಒತ್ತಾಯವೂ ಕೂಡ ಇಲ್ಲ. ಯಾರು ಕೂಡಾ ರಾಜೀನಾಮೆ ನೀಡಿ ಅಂತ ಯಡಿಯೂರಪ್ಪನವರಿಗೆ ಬಲವಂತ ಮಾಡಿರಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.ಹಾಗೇನಾದರೂ ಬಲವಂತ ಮಾಡಿದ್ದರೆ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಬಹುದಿತ್ತು. ಆದರೆ ಪಕ್ಷದ ನಿಷ್ಠೆಗೆ ಅವರು ತಲೆಬಾಗಿದ್ದಾರೆ. ಬೊಮ್ಮಾಯಿಯವರು ಇವತ್ತಿನಿಂದ ನಮ್ಮ ಮುಖ್ಯಮಂತ್ರಿಗಳು. ಕರ್ನಾಟಕವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಆದರೆ ನನಗೆ ಮಂತ್ರಿ ಸ್ಥಾನ ಸಿಗುತ್ತದೆ. ನನಗೆ ಮಂತ್ರಿ ಸ್ಥಾನ ಕೊಡಿ ಅಂತ ನಾನು ಯಾರಿಗೂ ಒತ್ತಡ ಹಾಕಲ್ಲ. ಈ ಭಾಗಕ್ಕೆ ಅವಶ್ಯಕತೆ ಇದೆಯ ಅಂತ ಹಿರಿಯರು ತೀರ್ಮಾನ ಮಾಡುತ್ತಾರೆ ಎಂದರು.ಸಿಎಂ ಬಗ್ಗೆ ಎಕ್ಸಾಮ್ ಬರ್ದಿದ್ದೀನಿ ಅನ್ನೋರು ಎಲಿಜಬಲ್ ಇದ್ರಾ ಅಂತ ಮೊದಲು ನೋಡಬೇಕು. ಯಾವುದೇ ಪರೀಕ್ಷೆ ಬರೆದರೂ ಅದನ್ನು ಮೌಲ್ಯಮಾಪನ ಮಾಡುವವರು ಯಡಿಯೂರಪ್ಪನವರೇ ಅಂತ ಗೊತ್ತಿಲ್ಲದೇ ಬರೆದಿದ್ದಾರೆ. ಇವರು ಕನ್ನಡದಲ್ಲಿ ಎಕ್ಸಾಮ್ ಬರೆದರು. ಆದರೆ ಅದು ಹಿಂದಿಯಲ್ಲಿ ಮೌಲ್ಯಮಾಪನ ಆಗಿದೆ. ಅದನ್ನು ಪರೀಕ್ಷೆ ಬರೆದವರು ಮರೆತಿದ್ದಾರೆ. ಯಡಿಯೂರಪ್ಪ ಎಲ್ಲೇ ಹೋದರು ಐದು ಸಾವಿರ ಜನ ಹಿಂದೆ ಬರ್ತಾರೆ ಆದರೆ ಪರೀಕ್ಷೆ ಬರೆದವರ ಹಿಂದೆ ಯಾರು ಬರುತ್ತಾರೆ..? ಅಂತ ಮಾಜಿ ಸಚಿವ ಸಿಪಿ ಯೋಗೇಶ್ವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.ಯಡಿಯೂರಪ್ಪನವರು ಜೀವನದಲ್ಲಿ ಸೋತೇ ಇಲ್ಲ. ಇವತ್ತು-ನಾಳೆ ಸೋಲುವಂಥ ವಿಶ್ಲೇಷಣೆ ಮಾಡುವ ಅಗತ್ಯ ಇಲ್ಲ. ಪಕ್ಷಾತೀತವಾಗಿ ಯಡಿಯೂರಪ್ಪನವರು, ದೇವೇಗೌಡ್ರು ರಾಜ್ಯದ ನಾಯಕರು. ವಿಜಯೇಂದ್ರ ಅವರ ಸಾಮಥ್ರ್ಯ ಏನೆಂಬುದು ವರಿಷ್ಠರು ತೀರ್ಮಾನಿಸಿ ಅವರಿಗೆ ಸರಿಯಾದ ಸ್ಥಾನಮಾನ ನೀಡುತ್ತಾರೆ. ಅವರ ಬಗ್ಗೆ ನಾನು ಮಾತಾಡಲ್ಲ ಎಂದರು.






 Advertisement 




Sign in to your account
Username or Email Address


Password

 Remember Me


