ಬೆಂಗಳೂರು: ಹಾಸನ ಸಂಸದರು (Hassan MP) ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಬಳಿಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮನವಿ ಮಾಡಿದ್ದಾರೆ.ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡಲು ಸಿಎಂ ಪತ್ರ ಬರೆದಿರುವ ವಿಚಾರ ಮತ್ತು ಪ್ರಜ್ವಲ್ ವಾಪಸ್ ಬರಲು ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದರೂ ವಾಪಸ್ ಬಾರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಹಾಸನ ಸಂಸದರಿಗೆ ನೇರವಾಗಿ ಬಂದು SIT ತನಿಖೆ ಎದುರಿಸುವಂತೆ ಮನವಿ ಮಾಡಿದ್ರು. ಧೈರ್ಯವಾಗಿ ತನಿಖೆ ಎದುರಿಸಿ ಅಂತ ಇಡೀ ಸಮಾಜಕ್ಕೆ ಸಂದೇಶ ಕೊಟ್ಟಿರು. ನಾವೂ ಕೂಡಾ ಸಂಸದರು ಬರಬಹುದು ಅಂತ ಕಾಯ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿಗಳಿಗೆ ಸಿಹಿಸುದ್ದಿ ಕೊಟ್ಟ ಡಿಬಾಸ್- ‘ಡೆವಿಲ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ನನ್ನ ಅಭಿಪ್ರಾಯವೂ ಅದೇ ಆಗಿದೆ. ಒಬ್ಬ ಪ್ರಜೆಯಾಗಿ ನಾನು ಕೇಳಿಕೊಳ್ಳೋದು, ಆರೋಪ ಬಂದಿರೋ ಸಮಯದಲ್ಲಿ ಬಂದು ತನಿಖೆ ಎದುರಿಸಬೇಕು. ಹಾಸನ ಸಂಸದರು ವಿದೇಶದಿಂದ ತನಿಖೆ ಎದುರಿಸೋದು ಸೂಕ್ತ. ಅತೀ ಶೀಘ್ರದಲ್ಲಿ ಅವರು ಬರಲಿ ಅಂತ ನಾವು ಕೂಡ ಕೇಳಿಕೊಳ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ದ ಆರೋಪ ಮಾಡುವ ವಿಪಕ್ಷಗಳ ವಿರುದ್ದ ಅಗ್ರೆಸಿವ್ ಅಟ್ಯಾಕ್ ಮಾಡಲು ಸಿಎಂ ಸೂಚನೆSign in to your account
Username or Email Address


Password

 Remember Me


