ಬೆಂಗಳೂರು : ಕರ್ನಾಟಕ ರಾಜ್ಯ ಗೃಹ ರಕ್ಷಕದಳ ವತಿಯಿಂದ ಬಿಇಎಲ್ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.ಬಿಇಎಲ್ ಆವಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಇಎಲ್ ನ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ಆರ್.ರಾವ್ ಮತ್ತು ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.ಬಳಿಕ ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಮಾತನಾಡಿ, ವನಮಹೋತ್ಸವ ಹಿನ್ನೆಲೆ ಬಿಇಎಲ್ ಆವರಣದಲ್ಲಿ 400 ಗಿಡಗಳನ್ನ ನೆಡಲಾಗಿದೆ. ಜೊತೆಗೆ ಗೃಹ ರಕ್ಷಕ ದಳದಿಂದ ಪ್ರತಿ ಗೃಹಕ್ಷಕರು 4 ರಿಂದ 5 ಗಿಡಗಳನ್ನ ರಸ್ತೆ ಬದಿ, ಸರ್ಕಾರಿ ಕಚೇರಿಗಳು ಆಸ್ಪತ್ರೆಗಳ ಶಾಲೆಗಳಲ್ಲಿ ನೆಡುವಂತೆ ಕರೆ ನೀಡಲಾಗಿದೆ. ಒಂದು ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶ್ರೀಘ್ರದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಎಂ ಗುರುರಾಜ್, ಜೀತೇಂದ್ರ ಸಿಂಗ್,ಶಂಕರಪ್ಪ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.Sign in to your account
Username or Email Address


Password

 Remember Me


