ಬೆಂಗಳೂರು: ಫೋನ್ ಕದ್ದಾಲಿಕೆ ವಿಚಾರವಾಗಿ ಆರೋಪ ಮಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಮತ್ತು ಮಾಜಿ ಸಿಎಂ ಹೆಚ್ ಡಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು‌ ನೀಡಿದ್ದಾರೆ.ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ (DK Shivakumar), ನಮ್ಮ ಹೋಮ್ ಮಿನಿಸ್ಟರ್ ಈಗಾಗಲೇ ಹೇಳಿದ್ದಾರೆ. ಫೋನ್ ಕದ್ದಾಲಿಕೆ ಬಗ್ಗೆ ಅಶೋಕ್ ರೈಟಿಂಗ್ ಅಲ್ಲಿ ಬರೆದುಕೊಡಲಿ. ಅವರು ಗೃಹ ಸಚಿವರು ಆಗಿದ್ದವರು, ಕೆಲವರು ಸಿಎಂ ಆಗಿದ್ದವರು. ಅವರ ಕಾಲದಲ್ಲಿ ಏನ್ ಆಗಿತ್ತು ಗೊತ್ತಿಲ್ಲವಾ..!? ಅವರ ಕಾಲದಲ್ಲಿ ಏನ್ ರಿಪೋರ್ಟ್ ಬಂದಿತ್ತು ಗೊತ್ತಿಲ್ಲವಾ..!? ಅಂತಾ ತಿರುಗೇಟು ‌ನೀಡಿದ್ರು.ಇದೇ ವೇಳೆ ಸಿಎಂ, ಡಿಸಿಎಂ ಸುತ್ತಮುತ್ತ ಇರೋರೇ ಮಾಹಿತಿ ಕೊಡ್ತಿದ್ದಾರೆ ಎಂಬ ಹೆಚ್ ಡಿಕೆ (HD Kumaraswamy) ಹೇಳಿಕೆಗೆ ಟಾಂಗ್ ಕೊಟ್ಟ ಡಿಕೆಶಿ, ಬಹಳ ಸಂತೋಷ, ಬಹಳ ಸಂತೋಷ. ಯಾರ್ಯಾರೋ ಮಾಹಿತಿ ಕೊಟ್ಟಿದ್ದಾರೆ. ಅವರು ಅಫಿಡವಿಟ್ ಫೈಲ್ ಮಾಡಲಿ ಎಂದು ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿಯೇ ಪೆನ್‍ಡ್ರೈವ್ ಟ್ರಾನ್ಸ್‌ಫರ್: ಹೆಚ್‍ಡಿಕೆ ಹೊಸ ಬಾಂಬ್Sign in to your account
Username or Email Address


Password

 Remember Me


