ಹಾಸನ: ಕೆಆರ್‌ ನಗರದ ಕಾಂಗ್ರೆಸ್‌ ಶಾಸಕ ಡಾ. ರವಿಶಂಕರ್‌ (RaviShankar) ಅವರ ಚಿತಾವಣೆಯಿಂದ ಹೆಚ್‌ಡಿ ರೇವಣ್ಣ (HD Revanna) ಮೇಲೆ ಅಪಹರಣ ಪ್ರಕರಣ (Kidnap Case) ದಾಖಲಾದ ಬಳಿಕ ಬಂಧನ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್‌ ಗಂಭೀರ ಆರೋಪ ಮಾಡಿದ್ದಾರೆ.ಹಾಸನದಲ್ಲಿ ಇಂದು ಜೆಡಿಎಸ್ ಜಿಲ್ಲಾಧ್ಯಕ್ಷ,ಮಾಜಿ ಶಾಸಕ ಲಿಂಗೇಶ್‌ ಮತ್ತು ಶ್ರವಣಬೆಳಗೊಳ ಶಾಸಕ  ಸಿ.ಎನ್.ಬಾಲಕೃಷ್ಣ ಅವರು ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು? ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚನೆ ಮಾಡಿದ ದಿನವೇ ಒಂದು ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣದಲ್ಲಿ ಏನು ಇಲ್ಲ. ಸುಲಭವಾಗಿ ಜಾಮೀನು (Bail) ಸಿಗುತ್ತದೆ ಎಂಬ ಕಾರಣಕ್ಕೆ ಮೇ 2 ರಂದು ಕೆ.ಆರ್‌ನಗರ ಶಾಸಕರು ಷಡ್ಯಂತ್ರ ಮಾಡಿ ರೇವಣ್ಣ ಮೇಲೆ ಅಪಹರಣ ಕೇಸ್‌ ಕೊಟ್ಟಿದ್ದಾರೆ. ಈ ಪ್ರಕರಣದ ನಂತರ ಎಸ್‌ಐಟಿ ಬಂಧಿಸಿದೆ ಎಂದು ಲಿಂಗೇಶ್‌ ದೂರಿದರು.ಸಿ.ಎನ್.ಬಾಲಕೃಷ್ಣ ಮಾತನಾಡಿ, ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಹಿಂದೆ ಯಾರಿದ್ದಾರೆ? ಆತನ ಜೊತೆ ಟೇಬಲ್‌ ಸಭೆ ಮಾಡಿದವರು ಯಾರು? ರಾಜ್ಯ ಮಟ್ಟದಲ್ಲಿ ದೊಡ್ಡ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆದು ಸತ್ಯಾಂಶ ಆದಷ್ಟು ಬೇಗ ಹೊರಬರಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: T20 ವಿಶ್ವಕಪ್‌ ಟೂರ್ನಿ ಮೇಲೆ ಉಗ್ರರ ಕರಿನೆರಳು – ಪಾಕ್‌ನಿಂದ ಭಯೋತ್ಪಾದಕ ದಾಳಿ ಬೆದರಿಕೆ! ಪೆನ್ ಡ್ರೈವ್‌ ವಿಚಾರವನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ರೇವಣ್ಣ ಅವರು ಎಲ್ಲಿಯೂ ಅಡಗಿ ಕುಳಿತ್ತಿಲ್ಲ. ಕೇಸ್ ದಾಖಲಾದಾಗಿನಿಂದ ಅವರು ಕ್ಷೇತ್ರದಲ್ಲಿ ಇದ್ದಾರೆ. ರೇವಣ್ಣ ಅವರನ್ನು ಬಂಧನ ಮಾಡುವ ಅವಶ್ಯಕತೆ ಇರಲಿಲ್ಲ. ಅವರು ಹಿರಿಯ ನಾಯಕರು, ಮಾಜಿ ಸಚಿವರಾಗಿರುವ ಕಾರಣ ವಿಚಾರಣೆಗೆ ಕರೆಯಬಹುದಿತ್ತು. ಅವರು ಎಲ್ಲಾ ರೀತಿಯ ತನಿಖೆಗೆ ಸಹಕಾರ ಮಾಡುತ್ತಿದ್ದು ರೇವಣ್ಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. Sign in to your account
Username or Email Address


Password

 Remember Me


