ಬೀದರ್: ಟ್ರ್ಯಾಕ್ಟರ್ ಓಡಿಸುತ್ತ ಕಬ್ಬಿನ ಬೆಳೆಗೆ ನೀರಿನಲ್ಲಿ ಕರಗುವ ರಸಗೊಬ್ಬರ ಸಿಂಪರಣೆ ಮಾಡಿ, ಜೋಳದ ಹೊಲದಲ್ಲಿ ಧ್ವನಿವರ್ಧಕ ಹಾಗೂ ಹೊಳೆಯುವ ರಿಬ್ಬನ್ ಕಟ್ಟುವ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಕ್ಕಿ ಓಡಿಸಿದರು.ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಸ್ತಾಪೂರ್ ಗ್ರಾಮದ ರೈತರ ಹೊಲಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಸಚಿವ ಬಿ.ಸಿ.ಪಾಟೀಲ್ ಭಾಗವಹಿಸಿದ್ದರು. ಗೋಧಿ ಬೆಳೆಯಲ್ಲಿ ಕಂಬೈನ್ಡ್ ಹಾರ್ವೇಸ್ಟರ್ ಮೂಲಕ ರಾಶಿಗೆ ಚಾಲನೆ ನೀಡಿದರು. ಜೊತೆಗೆ ಆಲೆಮನೆಯಲ್ಲಿ ಬೆಲ್ಲದ ಗಾಣ ಹಾಯಿಸಿದರು. ಹೀಗೆ ರೈತರ ವಿವಿಧ ಕೆಲಸಗಳಲ್ಲಿ ಭಾಗವಹಿಸುವ ಮೂಲಕ ಸಚಿವರು ಗಮನ ಸೆಳೆದರು.ಇದೇ ವೇಳೆ ರಿಬ್ಬನ್ ಕಟ್ ಮಾಡುವ ಮೂಲಕ ಪ್ರತಾಪ್ ನಗರದಲ್ಲಿನ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದರು. ಇದಕ್ಕೂ ಮೊದಲು ಗೋವಿಗೆ ಪೂಜೆ ಮಾಡಿದರು. ಸಂಸದ ಭಗವಂತ್ ಖೂಬಾ ಹಾಗೂ ಕೃಷಿ ಅಧಿಕಾರಿಗಳು ಸಾಥ್ ನೀಡಿದರು.ಇಂದು ಇಡೀ ದಿನ ಬಸವಕಲ್ಯಾಣದ ರೈತರೊಂದಿಗೆ ಕೃಷಿ ಸಚಿವರು ಕಾಲ ಕಳೆಯಲಿದ್ದಾರೆ. ಬಸವಕಲ್ಯಾಣ ತಾಲೂಕಿನ ಮುಸ್ತಾಪೂರ್, ಧನ್ನೂರ್, ಮಂಠಾಳ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ ರೈತರೊಂದಿಗೆ ಭಾಗವಹಿಸಲಿದ್ದಾರೆ. ಉಪ ಚುನಾವಣೆಯ ಸನಿಹದಲ್ಲಿ ಬಸವಕಲ್ಯಾಣಕ್ಕೆ ಮಾತ್ರ ಕೃಷಿ ಸಚಿವರು ಸೀಮಿತವಾಗಿರುವುದು ಅಚ್ಚರಿ ಮೂಡಿಸಿದೆ. ರೈತರನ್ನು ಓಲೈಕೆ ಮಾಡುತ್ತಿದ್ದಾರಾ ಎಂಬ ಅನುಮಾನ ಎದ್ದಿದೆ.ಟ್ರ್ಯಾಕ್ಟರ್ ಓಡಿಸುತ್ತ ಕಬ್ಬಿನ ಬೆಳೆಗೆ ನೀರಿನಲ್ಲಿ ಕರಗುವ ರಸಗೊಬ್ಬರ ಸಿಂಪರಣೆ ಮಾಡಿದ್ದಾರೆ. ಅಲ್ಲದೆ ಜೋಳದ ಹೊಲದಲ್ಲಿ ಧ್ವನಿವರ್ಧಕ ಹಾಗೂ ಹೊಳೆಯುವ ರಿಬ್ಬನ್ ಕಟ್ಟುವ ಮೂಲಕ ಹಕ್ಕಿ ಓಡಿಸಿದ್ದಾರೆ. ಗೋಧಿ ಬೆಳೆಯಲ್ಲಿ ಕಂಬೈನ್ಡ್ ಹಾರ್ವೇಸ್ಟರ್ ಮೂಲಕ ರಾಶಿಗೆ ಚಾಲನೆ ನೀಡಿದ್ದು, ಆಲೆಮನೆಯಲ್ಲಿ ಬೆಲ್ಲದ ಗಾಣ ಹಾಯಿಸಿದ್ದಾರೆ. ಬಳಿಕ ಹೊಲದಲ್ಲಿ ರೈತರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಕೃಷಿ ಸಚಿವರ ಮುಂದೆ ರೈತರು ಅಳಲು ತೋಡಿಕೊಂಡಿದ್ದಾರೆ. ವಿದ್ಯುತ್ ಸಮಸ್ಯೆ, ಬೆಂಬಲ ಬೆಲೆ, ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿದ್ದಾರೆ.Sign in to your account
Username or Email Address


Password

 Remember Me


