ಮೈಸೂರು: ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲ ಯುದ್ಧ ಮಾಡಿ ಬ್ರಿಟಿಷರಿಗೆ ಕಾಡಿದ್ದರು. ಅಪ್ರತಿಮ ವೀರ ಆಗಿದ್ದರು, ಅವರನ್ನ ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ ನಮ್ಮವರೇ ಯಾರೋ ಅವರನ್ನ ಹಿಡಿಯೋಕೆ ಸಹಾಯ ಮಾಡಿಬಿಟ್ಟರು ಎಂದು ಇತಿಹಾಸವನ್ನು ನೆನೆದರು.ಜಿಲ್ಲೆಯ ಗಂಧನಹಳ್ಳಿ ಗ್ರಾಮದಲ್ಲಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲ ಯುದ್ಧ ಮಾಡಿ ಬ್ರಿಟಿಷರಿಗೆ ಕಾಡಿದ್ದರು. ಅಪ್ರತಿಮ ವೀರ ಆಗಿದ್ದರು, ಅವರನ್ನ ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ ನಮ್ಮವರೇ ಯಾರೋ ಅವರನ್ನ ಹಿಡಿಯೋಕೆ ಸಹಾಯ ಮಾಡಿಬಿಟ್ಟರು. ಕೊನೆಗೆ ಅವರನ್ನ ಬ್ರಿಟಿಷರು ಗಲ್ಲಿಗೇರಿಸಿದರು. ಇಂತಹ ದೇಶದ್ರೋಹಿಗಳು ಸಮಾಜದಲ್ಲಿ ಯಾವಾಗಲೂ ಇರುತ್ತಾರೆ ಎಂದು ಹೇಳಿದರು.ಅವರು ಹುಟ್ಟಿದ್ದು ಆಗಸ್ಟ್ 15ರಂದು. ಅವರನ್ನ ಗಲ್ಲಿಗೇರಿಸಿದ್ದು ಜನವರಿ 26ರಂದು. ಎರಡು ದಿನ ನಮ್ಮ ದೇಶಕ್ಕೆ ಅತ್ಯಂತ ವಿಶೇಷ ದಿನಗಳು. ನಿಮಗೆ ಗೊತ್ತಾ ಈ ದಿನಗಳು? ಸುಮ್ಮನೆ ಗೊತ್ತಿಲ್ಲದೆ ಮಾತನಾಡಬೇಡಿ. ಕೆಲವರಿಗೆ ಗೊತ್ತಿರುವುದಿಲ್ಲ ಆದರೂ ತಲೆ ಅಲ್ಲಾಡಿಸಿಬಿಡುತ್ತಾರೆ. ತಿಳ್ಕೋಬೇಕು ಇದನ್ನೆಲ್ಲ ಗೊತ್ತಾಯ್ತಾ ಎಂದು ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿಮ್ಮೂರಿನಲ್ಲಿ ನಿರ್ಮಾಣ ಆಗಿದೆ. ಅವರ ಪ್ರತಿಮೆನಾ ಯಾಕೇ ನಿರ್ಮಾಣ ಮಾಡ್ತಾರೆ ಗೊತ್ತಾ? ಅವರಂತೆ ದೇಶ ಪ್ರೇಮ ಹುಟ್ಟಲಿ ಅಂತ. ಕುರುಬ ಜಾತಿಯಲ್ಲಿ ಹುಟ್ಟಿದಕ್ಕೆ ಅವರ ಪ್ರತಿಮೆ ಮಾಡೋದಲ್ಲ. ಅವರೇನು ಅರ್ಜಿ ಹಾಕ್ಕೊಂಡು ಕುರುಬ ಜಾತಿಯಲ್ಲಿ ಹುಟ್ಟಿರಲಿಲ್ಲ. ಇದನ್ನ ಅರ್ಥ ಮಾಡಿಕೊಳ್ಳಿ ಎಂದು ನೆರೆದಿದ್ದ ಜನರಿಗೆ ತಿಳಿ ಹೇಳಿದರು.ಇದೇ ವೇಳೆ ಹಳೆ ನೆನಪು ಬಿಚ್ಚಿಟ್ಟ ಸಿದ್ದರಾಮಯ್ಯ, ನಾನು ಲಾಯರ್ ಆಗಿದ್ದಾಗಲೂ ಗಂಧನಹಳ್ಳಿ ಗೊತ್ತು. ಆಗ ಮೂವರು ನಾಯಕರು ಇದ್ದರು. ಒಬ್ಬರಿಗೆ ಇನ್ನೊಬ್ಬರನ್ನು ಕಂಡರೆ ಆಗುತ್ತಿರಲಿಲ್ಲ. ಅವರನ್ನು ಒಟ್ಟಿಗೆ ಸೇರಿಸಿದರೆ ವಿಧಾನ ಸಭೆ ಚುನಾವಣೆ ಗೆಲ್ಲಬಹುದು ಎಂದು ಇಲ್ಲಿದೆ ಬಂದಿದ್ದೆ. ಅವರನ್ನ ಒಟ್ಟಾಗಿಸುವ ದಿನ ಮರಿ ಹೊಡೆದು ಮಾಂಸದ ಊಟ ಹಾಕಿದ್ದರು. ಹೀಗಾಗಿ ಈ ಗ್ರಾಮದ ಜೊತೆ ನನಗೆ ನಿಕಟ ಸಂಪರ್ಕ ಇದೆ ಎಂದರು.Sign in to your account
Username or Email Address


Password

 Remember Me


