ಯಾದಗಿರಿ: ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ದೂರು ನೀಡಲು ಹುಣಸಗಿ ಬಳಿ ಬಂದ ನಾಲ್ವರಿಗೆ ಪೊಲೀಸ್ ಸ್ಟೇಷನ್ ಎದುರಿನಲ್ಲಿಯೇ ಮುಸ್ಲಿಂ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.ಹುಣಸಗಿ ಪಟ್ಟಣದ ಕೆಂಭಾವಿ ರಸ್ತೆ ಬಳಿಯ ಸರ್ವೆ ನಂಬರ್ 456 ಖಬರಸ್ಥಾನದಲ್ಲಿರುವ 6 ಎಕರೆ ಖಬರಾಸ್ತಾನ ಆಸ್ತಿಯಲ್ಲಿ 2 ಎರಡು ಎಕರೆಯನ್ನು ಸಯ್ಯದ್ ಮುರ್ತಜಾ ಖಾದ್ರಿ ಬೆಣ್ಣೂರು ಕುಟುಂಬಸ್ಥರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೆಲ ಮುಸ್ಲಿಂ ಸಮುದಾಯದ ಜನರು ಆರೋಪಿಸಿದ್ದಾರೆ.ಈ ವಿಚಾರವಾಗಿ ಪ್ರಶ್ನಿಸಿ ಬೆಣ್ಣೂರು ಕುಟುಂಬವರಾದ ದಾವಲ್ ಸಾಬ್ ಬೆಣ್ಣೂರು, ಹುಸೇನ್ ಸಾಬ್ ಗಾದಿ, ಸೂಫಿ ಸಾಬ್, ಹಸನ್ ಸಾಬ್ ಎಂಬವರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಈ ವೇಳೆ ಪೊಲೀಸರು ಸಮಾಜದ ವಿಚಾರ ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಲು ನಿರ್ದೇಶನದ ನೀಡಿದ್ದಾರೆ.ಸಯ್ಯದ್ ಮೊಹಮ್ಮದ್ ಹನಿಫ್ ಬೆಣ್ಣೂರು, ಮೊಹಮ್ಮದ್ ಇಲಿಯಾಸ್ ಮಾತಿಗೆ ಜನ ತಲೆಯಾಡಿಸಿದ್ದು, ಸಭೆ ಹೆಸರಲ್ಲಿ ಪೊಲೀಸ್ ಠಾಣೆ ಎದುರಲ್ಲೇ ನಾಲ್ವರಿಗೆ ಧಾರ್ಮಿಕ ಕಾರ್ಯ, ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗದಂತೆ ಬಹಿಷ್ಕಾರ ಹಾಕಿದ್ದಾರೆ ಹಾಗೂ ಸಮಾಜದವರ ಮದುವೆ ಸಮಾರಂಭಕ್ಕೂ ಕರೆಯದಂತೆ ಮುಖಂಡರು ತಾಕೀತು ಮಾಡಿದ್ದಾರೆ. ಸಾಮಾಜಿಕ ಬಹಿಷ್ಕಾರ ಹಾಕುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.Sign in to your account
Username or Email Address


Password

 Remember Me


