ಧಾರವಾಡ: ನೇರ ರೈಲು ಸಂಚಾರ ಕಲ್ಪಿಸುವ ದೃಷ್ಟಿಯಿಂದ ಮಂಜೂರಾಗಿರುವ ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈ ನೂತನ ರೈಲು ಮಾರ್ಗ ಆಗಬೇಕಾದ್ರೆ ನೂರಾರು ರೈತರು ಜಮೀನು ಕಳೆದುಕೊಳ್ಳಬೇಕಾಗಿದೆ.ಧಾರವಾಡ ನಂತರ ರೈಲು ಸಂಚರಿಸಬೇಕಾದ ಆರಂಭದ ಊರಿನಲ್ಲೇ ಈಗ ರೈಲು ಮಾರ್ಗ ಮಾಡೋದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಧಾರವಾಡದಿಂದ ಬೆಳಗಾವಿಗೆ ರೈಲು ಲೋಂಡಾ ಮೂಲಕ ಹಾದು ಹೋಗಲು 3 ಗಂಟೆ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆ ಪ್ರಯಾಣದ ಸಮಯವನ್ನು ಕಡಿಮೆ ಮಾಡಬೇಕು ಹಾಗೂ ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲಿನ ಮೂಲಕ ಜನರಿಗೆ ಅನುಕೂಲ ಮಾಡಬೇಕು ಎನ್ನುವ ಉದ್ದೇಶದ ಈ ಯೋಜನೆ ದಶಕಗಳ ಹೋರಾಟದಿಂದ ಸಿಕ್ಕಿದ್ದಾಗಿದೆ. ಅದರಲ್ಲಿಯೂ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಇದನ್ನೂ ಓದಿ: ದಿ. ಸುರೇಶ್ ಅಂಗಡಿ ಘೋಷಿಸಿದ್ದ ನೇರ ರೈಲು ಮಾರ್ಗಕ್ಕೆ 50 ಕೋಟಿ ಅನುದಾನ ಮೀಸಲುಈ ಯೋಜನೆಗಾಗಿ ರೈಲು ಮಾರ್ಗ ಮಾಡಬೇಕಾದ್ರೆ ಅದಕ್ಕೆ ಧಾರವಾಡಕ್ಕೆ ಹೊಂದಿಕೊಂಡಿರೋ ಮೊದಲ ಗ್ರಾಮ ಚಿಕ್ಕಮಲ್ಲಿಗವಾಡದಿಂದಲೇ ವಿರೋಧ ವ್ಯಕ್ತವಾಗಿದೆ. ನಮಗಂತೂ ಈ ರೈಲು ಮಾರ್ಗ ಬೇಡವೇ ಬೇಡ ಬೇರೆ ಕಡೆ ಸುತ್ತುವರಿಸಿಕೊಂಡು ಹೋಗಿ, ನಮ್ಮೂರ ಮೇಲೆ ರೈಲು ಹಾದು ಹೋಗೋದೇ ಬೇಡ ಅಂತಾ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇದೇ ಗ್ರಾಮದ ರೈತರು ಐಐಟಿಗೆ ಜಮೀನನ್ನ ಕೊಟ್ಟಾಗಿದೆ. ಆದರೆ ಈಗ ಇರುವ ಜಮೀನನ್ನ ಸರ್ಕಾರ ತೆಗೆದುಕೊಂಡರೆ ನಮಗೆ ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ದಾರಿನೇ ಇಲ್ಲ ಎಂದು ಗ್ರಾಮಸ್ಥರು ತಮ್ಮ ನೋವನ್ನ ತೋಡಿಕೊಳ್ಳುತಿದ್ದಾರೆ.Sign in to your account
Username or Email Address


Password

 Remember Me


