ಬೆಂಗಳೂರು: ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟರ್, Director of Education National cricket academy ಸುಜಿತ್ ಸೋಮಸುಂದರ್ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯೆ ಕ್ಷೇತ್ರೀಯ ಕಾರ್ಯವಾಹರು ಮತ್ತು ಅಭಿಯಾನದ ರಾಜ್ಯ ಕಾರ್ಯದರ್ಶಿ ನಾ.ತಿಪ್ಪೇಸ್ವಾಮಿ ಜಿ ಅವರು ಇಂದು ಅವರ ಮನೆಯಲ್ಲಿ ಭೇಟಿ ಮಾಡಿ ನಿಧಿ ಸಂಗ್ರಹ ಮಾಡಿದರು.ಈ ಸಮಯದಲ್ಲಿ ನಾ.ತಿಪ್ಪೇಸ್ವಾಮಿ ಜಿ ಅವರು ಅಭಿಯಾನದ ಬಗ್ಗೆ ವಿವರವಾಗಿ ಹೇಳಿದರು. ತದನಂತರ ಸುಜಿತ್ ಸೋಮಸುಂದರ್ ಅವರು ರಾಮ ಮಂದಿರ ನಿರ್ಮಾಣ ತುಂಬಾ ಸಂತಸ ತಂದಿದೆ. ದೇಶದಲ್ಲಿ ನವ ಯುಗ ಪ್ರಾರಂಭವಾಗಿದ್ದು, ಇದು ಹೀಗೆ ಮುಂದುವರಿಯಬೇಕು ಎಂದು ತಮ್ಮ ಮನದಾಳದ ಮಾತು ತಿಳಿಸಿದರು.Sign in to your account
Username or Email Address


Password

 Remember Me


