ಮಂಡ್ಯ: ಮಂಡ್ಯದ ಚೀರನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳಿಂದ ದೇವಸ್ಥಾನದ ಅರ್ಚಕನನ್ನು ನೇಮಕ ಮಾಡಲು ಜನರಲ್ಲಿ ಎದ್ದಿದ್ದ ಗೊಂದಲಗೆ ಬಸಪ್ಪ ಒಂದೇ ಗಂಟೆಯಲ್ಲಿ ಉತ್ತರ ನೀಡಿದ್ದಾನೆ.ಚೀರನಹಳ್ಳಿ ಗ್ರಾಮದಲ್ಲಿ ಇರುವ ಉರುಗಮ್ಮದೇವಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಮಸಣಯ್ಯ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರನ್ನು ಅರ್ಚಕರನ್ನಾಗಿ ನೇಮಕ ಮಾಡುವುದು ಎಂದು ಗ್ರಾಮದ ಜನರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈ ಗೊಂದಲ ಬಗೆಹರಿಸಿಕೊಳ್ಳಲು ಇಂದು ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಗಿತ್ತು. ಗ್ರಾಮಕ್ಕೆ ಬಂದ ಬಸಪ್ಪನಿಗೆ ಗ್ರಾಮಸ್ಥರು ಪೂಜೆ ಮಾಡಿ ಬರ ಮಾಡಿಕೊಂಡರು. ನಂತರ ಊರಿನ ಹೊರಭಾಗದಲ್ಲಿ ಇರುವ ಕಲ್ಯಾಣಿಯ ಬಳಿ ಅರ್ಚಕ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಯಿತು. ಈ ವೇಳೆ ಚೀರನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಸೇರಿದ್ದರು.ಈ ಸಂದರ್ಭದಲ್ಲಿ ಅಷ್ಟೊಂದು ಜನರ ಮಧ್ಯ ಇದ್ದ ಅದೇ ಗ್ರಾಮದ ಶಿವಣ್ಣ ಅವರನ್ನು ಬಸಪ್ಪ ಕೊಂಬಿನಿಂದ ತಿವಿದು ಆಯ್ಕೆಯ ಸೂಚನೆ ನೀಡಿತು. ಬಳಿಕ ಶಿವಣ್ಣ ಅವರನ್ನು ನೂಕಿಕೊಂಡು ಬಂದು ಕಲ್ಯಾಣಿಯ ಒಳಗೆ ತಳಿತು. ಈ ಮೂಲಕ ಗ್ರಾಮದಲ್ಲಿದ್ದ ಐದು ವರ್ಷದ ಸಮಸ್ಯೆಯಾದ ಅರ್ಚಕ ನೇಮಕಾತಿಯನ್ನು ಬಸಪ್ಪ ಒಂದೇ ಗಂಟೆಯಲ್ಲಿ ಬಗೆಹರಿಸಿತು. ಈ ಪವಾಡವನ್ನು ಕಂಡ ಜನರು ಉಘೇ ಉಘೇ ಎಂದು ಕೂಗಿದರು.






 Advertisement 




Sign in to your account
Username or Email Address


Password

 Remember Me


