ಬೆಂಗಳೂರು: ಒಂದೆಡೆ ಮಹಾರಾಷ್ಟ್ರ ಸಿಎಂ ವೀಡಿಯೋ ಬಿಡುಗಡೆಯಾದರೆ ಮತ್ತೊಂದೆಡೆ ಗೋವಾ ಸಿಎಂ ನೀರು ಕ್ಯಾತೆ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. ನಿತ್ಯ ಹತ್ತಾರು ಬಗೆಯ ಕ್ಯಾತೆಗಳನ್ನ ನೆರೆಯ ರಾಜ್ಯಗಳು ತೆಗೆಯುತ್ತಿವೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ನಗರದಲ್ಲಿ ಹೋರಾಟ ಸ್ವರೂಪ ತೀವ್ರವಾಗಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಲೆಕ್ಕಚಾರ ಇದೆ. ಹೌದು, ಮಹಾರಾಷ್ಟ್ರ ಸಿಎಂ 50 ವರ್ಷದ ಹಿಂದಿನ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾರವಾರ ಸಹಕಾರ ಬ್ಯಾಂಕ್ ಮರಾಠಿ ಭಾಷೆ ಬಳಕೆ ಮಾಡಿರುವುದು, ಬೆಳಗಾವಿ ಬ್ರಿಡ್ಜ್ ಗಳ ಬಳಿ ಮರಾಠಿ ಭಾಷೆ ಬಳಕೆಯ ಸಾಕ್ಷ್ಯಗಳ ಬಿಡುಗಡೆ ಮಾಡಿದ್ದಾರೆ.ಮತ್ತೊಂದೆಡೆ ಮಹಾದಾಯಿ ನೀರು ಹಂಚಿಕೆ ರಾಜಿ ಇಲ್ಲ ಸರ್ವಪಕ್ಷ ನಿಯೋಗ ಪಿಎಂ ಬಳಿ ನಿಯೋಗ ಹೊರಡುವುದಾಗಿ ಗೋವಾ ಸಿಎಂ ಪ್ರಸ್ತಾಪ ಮಾಡಿದ್ದಾರೆ. ಒಂದೇ ಬಾರಿ ಎರಡೆರಡು ಭಾಗದ ಡಬಲ್ ಕ್ಯಾತೆ ಬೆನ್ನತ್ತಿದೆ. ಇದೆಲ್ಲ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.ಈ ಬಗ್ಗೆ ಹಲವರು ಅಭಿಪ್ರಾಯಿಸಿ, ನಮ್ಮ ಸಂಸದರು 25 ಜನರನ್ನ ಗೆಲ್ಲಿಸಲಾಗಿದೆ. ನೀರಿನ ವಿಚಾರದಲ್ಲಿ ರಾಜಿ ಮಾಡದೇ ನೀವು ಸರ್ವಪಕ್ಷಗಳ ನಿಯೋಗ ಹೋಗಿ ಎಂದು ಆಗ್ರಹಿಸಿದರು. ಇದೇ ವೇಳೆ ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಮಾತನಾಡಿ, ತಲೆಕೆಟ್ಟ ಮಹಾರಾಷ್ಟ್ರ ಸಿಎಂ ವೀಡಿಯೋ ಮಾತ್ರ ಸಾಕ್ಷಿ ಆಗಲ್ಲ. ಕರ್ನಾಟಕ ನೆಲದಲ್ಲಿ ಎಲ್ಲ ಭಾಷೆಯ ಶಾಲೆ ತೆರೆಯಲು ಅವಕಾಶ ಇದೆ. ಇದು ಸಾಕ್ಷಿ ಆಗಲ್ಲ ಎಂದು ಆಕ್ರೋಶ ಹೊರಹಾಕಿದರು. ಜೊತೆಗೆ ಕೂಡಲೇ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈ ಬಿಡಿ ಎಂದು ಆಗ್ರಹಿಸಿದರು.ಇತ್ತ ಕನ್ನಡ ಚಳವಳಿ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಮಹಾರಾಷ್ಟ್ರ ಸಿಎಂಗೆ ಭಾಷೆ ಮೇಲೆ ಅಧಿಕಾರ ಸಿಕ್ಕಿದೆ. ಅದರ ಪ್ರೇಮ ಗೋವಾ ಸಿಎಂಗೂ ರಾಜ್ಯದ ನೀರಿನ ಆಸಕ್ತಿ ಕ್ಯಾತೆ ತೆಗೆಯುತ್ತಾರೆ. ಇತ್ತ ನೀವು ಸಂಸದರು ನಿಮ್ಮ ಜವಾಬ್ದಾರಿ ಜಾಸ್ತಿ ರಕ್ಷಣೆ ಮಾಡ್ರಿ, ಕನ್ನಡಪರ ಸಂಘಟನೆಗಳು ಮಾತ್ರ ನಮ್ಮ ಜವಾಬ್ದಾರಿಗೆ ಸದಾ ಬದ್ಧವಾಗಿದೆ. ಕೂಡಲೇ ಸಿಎಂ ರಾಜೀನಾಮೆ ಕೊಡಲಿ ಇಲ್ಲ ನ್ಯಾಯ ಕೊಡಲಿ. ನಾಳೆ ಮರಾಠ ಪ್ರಾಧಿಕಾರ ಕೈ ಬಿಡುವಂತೆ ರೈಲು ಬಂದ್ ಚಳವಳಿ ತೀವ್ರ ಸ್ವರೂಪ ಪಡೆಯಲಿದೆ ಎಂದರು.






 Advertisement 




Sign in to your account
Username or Email Address


Password

 Remember Me


