ಚಿತ್ರದುರ್ಗ: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮಹಿಳೆಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗದ ಬಡಾಮಕಾನ್ ಬಡಾವಣೆಯಲ್ಲಿ ನಡೆದಿದೆ.ಬರಹನ್ ಬೇಗಂ(55) ಹತ್ಯೆಯಾದ ದುರ್ದೈವಿ ಮಹಿಳೆ. ಆರೋಪಿಯನ್ನು ಆರೋಪಿ ಇಂತಿಯಾಜ್ ಎಮದು ಗುರುತಿಸಲಾಗಿದ್ದು, ಈತ ಘಟನೆ ಬೆನ್ನಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ಮಹಿಳೆಗೆ ಚಾಕು ಇರಿಯುವಾಗ ಬಿಡಿಸಲು ಹೋದ ಪುತ್ರನ ಮೇಲೂ ಗಾಯಗಳಾಗಿವೆ. ಕೂಡಲೇ ಗಾಯಾಳು ಮೆಹಫೂಜ್ ಇಲಾಯಿನನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆರೋಪಿ ಇಂತಿಯಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


