ಚಿಕ್ಕಮಗಳೂರು: ಪ್ರತಿಯೊಂದು ಜೀವಿಗೂ ಜೀವನದ ಪಾಠ ಕಲಿಸುವುದು ಹಸಿವು. ಹೊಟ್ಟೆ ಹಸಿದವರ ಹಸಿವು ನೀಗಿಸುವವರೇ ಎಷ್ಟೋ ಜನರಿಗೆ ದೇವರಾಗಿರುತ್ತಾರೆ. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದಾಗ ಆ ಮಗುವನ್ನು ಮುದ್ದಾಡಿ ನನ್ನ ಮಗು ಎಂಬ ಭಾವನೆಯಿಂದ ತನ್ನ ಎದೆಯ ಹಾಲು ಕುಡಿಸುತ್ತಾಳೆ. ತಾಯಿ ಮಗುವಿನ ವಾತ್ಸಕ್ಕೆ ಬೆಲೆಯೇ ಕಟ್ಟಲಾಗುವುದಿಲ್ಲ. ಮನುಷ್ಯರಂತೆಯೇ ಮೂಕ ಪ್ರಾಣಿಗಳಿಗೆ ಕೂಡ ತನ್ನ ಮರಿಗಳ ಮೇಲೆ ಭಾವನೆಗಳಿರುತ್ತದೆ ಎಂಬುದಕ್ಕೆ ಶ್ವಾನವೊಂದು ಸಾಕ್ಷಿಯಾಗದೆ. ಆದ್ರೆ ಶ್ವಾನ ಇಲ್ಲಿ ತನ್ನ ಮರಿಯನ್ನು ಹೊರತುಪಡಿಸಿ ಮತ್ತೊಂದು ಪ್ರಾಣಿಗೆ ಪ್ರೀತಿಯಧಾರೆ ಎರೆದಿದೆ. ಶ್ವಾನವೊಂದು ಕರುವಿಗೆ ಹಾಲು ಕುಡಿಸಿ ಅದರ ಹಸಿವನ್ನು ನೀಗಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ನಾಯಿ ಮತ್ತು ಕರುವಿನ ಬಾಂಧವ್ಯಕ್ಕೆ ಜನ ಮೂಕವಿಸ್ಮಿತರಾಗಿದ್ದಾರೆ.ಹೌದು. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದ ನಿವಾಸಿ ಚಂದ್ರಣ್ಣ ಎಂಬವರ ಮನೆಯಲ್ಲಿ ನಾಯಿ ಸಾಕಿದ್ದರು. ಇತ್ತೀಚೆಗೆ ಹಸುವೊಂದು ಕರುವಾಕಿತ್ತು. ಸದ್ಯ ಕರುವಿಗೆ 4 ತಿಂಗಳಾಗಿದ್ದು, ಹಸು ಮೇಯಲು ಹೊರಕ್ಕೆ ಹೋದಾಗ ಕರುವಿನ ಹಸಿವನ್ನು ಈ ಶ್ವಾನ ನೀಗಿಸುತ್ತಿದೆ. ನಾಯಿ ತನ್ನ ಮರಿಗಳಿಗೆ ಹಾಲು ಉಣಿಸವುದರ ಜೊತೆ ಜೊತೆಗೆ ಕರುವಿಗೆ ಕೂಡ ಹಾಲುಣಿಸುತ್ತಿದೆ. ಜೊತೆಗೆ ಹಸು ಮೇಯಲು ಹೋದಾಗ ನಾಯಿ ಜೊತೆ ಕರು ಆಟವಾಡುತ್ತದೆ. ಇದನ್ನು ನೋಡಿದ ಊರಿನ ಜನ ಶ್ವಾನ ಮತ್ತು ಹಸುವಿನ ಅನುಬಂಧಕ್ಕೆ ಬೆರಗಾಗಿದ್ದಾರೆ.ಮೂಕ ಪ್ರಾಣಿಗಳೆ ಹಾಗೇ ಅವುಗಳಲ್ಲಿ ಮೇಲು- ಕೀಳು ಎಂಬ ಬೇಧ-ಭಾವವಿರುವುದಿಲ್ಲ. ನಿಸ್ವಾರ್ಥ ಮತ್ತು ಸ್ವಚ್ಛ ಮನಸ್ಸು ಹೊಂದಿರುತ್ತವೆ. ಈ ಮುಗ್ಧ ಪ್ರಾಣಿಗಳ ನಿಷ್ಕಲ್ಮಷ ಭಾವನೆಗಳಿಗೆ ಸಾಟಿ ಯಾವುದೂ ಇಲ್ಲ. ಮಾನವೀಯತೆಯೇ ಕಳೆದುಕೊಂಡಿರುವ ಜನರ ಮಧ್ಯೆ ಈ ಪ್ರಾಣಿಗಳ ಮುಗ್ಧತೆಗೆ ಬೆಲೆ ಕಟ್ಟಲು ಅಸಾಧ್ಯ ಅಂತ ಹೇಳಿದರೆ ತಪ್ಪಾಗಲಾರದು ಎಂಬುವುದಕ್ಕೆ ಈ ಅಪರೂಪದ ಘಟನೆಯೇ ಸಾಕ್ಷಿ.Sign in to your account
Username or Email Address


Password

 Remember Me


