ಚಿಕ್ಕಬಳ್ಳಾಪುರ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಗಣೇಶ‌ ಮೂರ್ತಿ ವಿಸರ್ಜನೆ ವೇಳೆ ನಡೆಯುತ್ತಿರೋ ಅಹಿತಕರ ಘಟನೆಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ (Chikkaballapura Police) ಎಚ್ಚೆತ್ತಿಕೊಂಡಿದೆ.ಭಾನುವಾರವಾದ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಬೈಪಾಸ್ ಗಣೇಶ ವಿಸರ್ಜನೆ (Ganesha Idol Demolition) ಕಾರ್ಯಕ್ರಮ ನೇರವೇರಲಿದ್ದು ನಗರದಲ್ಲಿ ಬೈಪಾಸ್ ಗಣೇಶನ ಮೆರವಣಿಗೆ ವಿಜೃಂಭಣೆಯಿಂದ ಜರುಗಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ಇದನ್ನೂ ಓದಿ: ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು – ಉದ್ಯಮಿಯ ಬರ್ಬರ ಹತ್ಯೆ, ಮಚ್ಚಿನೇಟಿಂದ ಪತ್ನಿ ಗಂಭೀರಗಣೇಶ ವಿಸರ್ಜನೆ ಕಾರ್ಯಕ್ರಮಕ್ಕಾಗಿಯೇ 600ಕ್ಕೂ ಹೆಚ್ಚು ಮಂದಿ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಎಸ್ಪಿ ಕುಶಾಲ್ ಚೌಕ್ಸಿ ಹಾಗೂ ಎಎಸ್ಪಿ ಖಾಸೀಂ ನೇತೃತ್ವದಲ್ಲಿ 4 ಮಂದಿ ಡಿವೈಎಸ್ಪಿ ಹಾಗೂ 12 ಮಂದಿ ಸಿಪಿಐ, 20 ಮಂದಿ ಪಿಎಸ್ಐ, 500 ಮಂದಿ ಪೊಲೀಸರು, ಸಶಸ್ತ್ರ ಪೊಲೀಸ್ ಮೀಸಲು ಪಡೆಗಳು, ಟಿಯರ್ ಗ್ಯಾಸ್ ವಜ್ರ ವಾಹನವನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!ಇನ್ನೂ ಪ್ರಮುಖ ವೃತ್ತಗಳು ಹಾಗೂ ಮಸೀದಿ, ಮಂದಿರಗಳ ಬಳಿ ಸೂಕ್ಷ ಪ್ರದೇಶಗಳಾಗಿ ಗುರ್ತಿಸಿ ಸಿಸಿಟಿವಿ ಆಳವಡಿಸಿ ನಿಗಾ ವಹಿಸಿಲಾಗುತ್ತಿದೆ. ಇತಿಹಾಸದಲ್ಲೇ ಇಂದೆಂದೂ ಮಾಡದ ಭಾರೀ ಭದ್ರತೆ ಮೂಲಕ ಗಣೇಶ ವಿಸರ್ಜನಾ ಕಾರ್ಯಕ್ರಮ ನೇರವೇರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್‌ನಲ್ಲಿ ಬೆಂಗಳೂರಿಗರೇ ಫಸ್ಟ್ – ಸೆಪ್ಟೆಂಬರ್‌ನಲ್ಲಿ ಬಿಎಂಟಿಸಿಗೆ ಬರೋಬ್ಬರಿ 8 ಕೋಟಿ ಆದಾಯSign in to your account
Username or Email Address


Password

 Remember Me


