ಬೆಳಗಾವಿ: ತಂದಯೇ ಮಗನ ಎದೆಗೆ ಕೊಡಲಿ ಏಟು ಹಾಕಿ ಕೊಲೆಗೈದ ಘಟನೆ ಗೋಕಾಕ್ ತಾಲೂಕಿನ ಮೇಲ್ಮನಹಟ್ಟಿಯಲ್ಲಿ ನಡೆದಿದೆ.ಮೇಲ್ಮನಹಟ್ಟಿಯ ಯಮನಪ್ಪ(41) ಕೊಲೆಯಾದ ಮಗ. ಬಾಳಪ್ಪ ಗುತ್ತಿಗೆ ಹತ್ಯೆಗೈದ ತಂದೆ. ದನಕ್ಕೆ ಮೇವು ಹಾಕುವ ವಿಚಾರಕ್ಕೆ ತಂದೆ ಮಗನ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.ಬಾಳಪ್ಪ ಇಂದು ದನಕ್ಕೆ ಮೇವು ಹಾಕುವಂತೆ ಮಗನಿಗೆ ಹೇಳಿದ್ದ. ಆದರೆ ಯಮನಪ್ಪ ತಂದೆಯ ಮಾತನ್ನು ನಿರ್ಲಕ್ಷಿಸಿ ಸುಮ್ಮನಾಗಿದ್ದ. ಇದರಿಂದ ಕೋಪಗೊಂಡ ಬಾಳಪ್ಪ ಮಗ ಜೊತೆಗೆ ಜಗಳ ಆರಂಭಿಸಿದ್ದ. ಪರಿಣಾಮ ಮಾತಿಗೆ ಮಾತು ಬೆಳೆದು ಕೊಡಲಿ ಹಿಡಿದಿದ್ದ ಬಾಳಪ್ಪ ಮಗನ ಎದೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯಮನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಳಪ್ಪ ಪರಾರಿಯಾಗಿದ್ದಾನೆ.ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನಿಗೆ ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


