ಬೀದರ್: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬೀದರ್‍ನ ಬ್ರಿಮ್ಸ್ ಮತ್ತೊಂದು ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸೋಂಕಿತರು ಬಳಸುವ ಮತ್ತು ವೈದ್ಯರು, ಸಿಬ್ಬಂದಿ ಬಳಸಿದ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್‍ಗಳನ್ನ ಬೇಕಾಬಿಟ್ಟಿ ಎಸೆದು ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಮತ್ತಷ್ಟು ಸೋಂಕು ಹರಡುವ ಆತಂಕ ಎದುರಾಗಿದೆ.ಹೌದು. ಬ್ರೀಮ್ಸ್ ನ ಕೊರೊನಾ ವಿಶೇಷ ವಾರ್ಡಿನಲ್ಲಿರುವ ಸೋಂಕಿತರು ಬಳಸುವ ಬೆಡ್‍ಶೀಟ್ ಮತ್ತು ಇನ್ನಿತರ ಬಟ್ಟೆಗಳನ್ನು ಸಿಬ್ಬಂದಿ ಕ್ಲೀನ್ ಮಾಡುತ್ತಾರೆ. ಆಸ್ಪತ್ರೆಯ ಎಲ್ಲಾ ತ್ಯಾಜ್ಯವನ್ನು ಸಂಗ್ರಹ ಮಾಡ್ತಾರೆ. ಆದರೆ ಸೋಂಕಿತರ ಜೊತೆ ನೇರ ಸಂರ್ಪಕಕ್ಕೆ ಬರುವ ಇವರು ಕ್ಲೀನ್ ಮಾಡಿದ ನಂತರ ತಾವು ಧರಿಸಿರುವ ಮಾಸ್ಕ್, ಗ್ಲೌಸ್, ಪಿಪಿಟಿ ಕಿಟ್ ಸೇರಿದಂತೆ ಎಲ್ಲವನ್ನು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ಬ್ರೀಮ್ಸ್ ಆಸ್ಪತ್ರೆಯ ಕ್ಲಿನಿಂಗ್ ಸ್ಥಳದಿಂದ ಸಾರ್ವಜನಿಕರು ಹಾಗೂ ಪ್ರಾಣಿಗಳು ಓಡಾಡುವ ಮುಖ್ಯ ರಸ್ತೆಗೆ ಎಸೆಯುತ್ತಿದ್ದಾರೆ. ಜೊತೆಗೆ ಸೋಂಕಿತರ ಬಟ್ಟೆಗಳನ್ನು ಕ್ಲೀನ್ ಮಾಡಿದ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಆರೋಗ್ಯ ಇಲಾಖೆ ನಿಯಮದ ಪ್ರಕಾರ ಒಂದು ಸಾರಿ ಬಳಸಿದ ಎಲ್ಲಾ ವಸ್ತುಗಳನ್ನು ನಿಯಮಿತವಾಗಿ ಡಿಸ್ಪೋರೆಜ್ ಮಾಡಬೇಕು. ಆದರೆ ಇಲ್ಲಿನ ಸಿಬ್ಬಂದಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಬಿಸಾಡುತ್ತಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ 500 ಗಡಿ ದಾಟಿರುವ ಮಹಾಮಾರಿ ಕೊರೊನಾ 15 ಜನರನ್ನು ಬಲಿ ಪಡೆದಿದೆ. ಜೊತೆಗೆ ಅಂತರ್ ರಾಜ್ಯ ಕಂಟಕ ಜಿಲ್ಲೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಇದರ ನಡುವೆ ಸೋಂಕನ್ನ ತಡೆಯಬೇಕಾದ ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿಸ್ತಿದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಕಿತರ ಅಷ್ಟೆ ಅಲ್ಲ, ಕೆಲ ಸಿಬ್ಬಂದಿ ಗ್ಲೌಸ್ ಹಾಕದೇ, ಪಿಪಿಟಿ ಕಿಟ್, ಮಾಸ್ಕ್ ಕೂಡ ಹಾಕದೆ ನಿರ್ಲಕ್ಷ್ಯವಹಿಸಿದ್ದಾರೆ. ಇದನ್ನ ಪ್ರಶ್ನಿಸಿದ್ರೆ ಜಿಲ್ಲಾ ಆರೋಗ್ಯಾಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡಿದ್ದಾರೆ.ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಕೊರೊನಾ ತನ್ನ ಕದಂಬ ಬಾಹುಗಳನ್ನು ಜಿಲ್ಲೆಯಲ್ಲಿ ಚಾಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇನ್ನಾದರೂ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಗೊಂಡು ಇಂತಹ ನಿರ್ಲಕ್ಷ್ಯಗಳಿಗೆ ಬ್ರೇಕ್ ಹಾಕಬೇಕಿದೆ.






 Advertisement 




Sign in to your account
Username or Email Address


Password

 Remember Me


