ಬೀದರ್: ಕಳೆದ ಐದು ದಿನಗಳಿಂದ ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾ ತನ್ನ ಸಾವಿನ ಸರಣಿ ಶುರು ಮಾಡಿದೆ. ಜಿಲ್ಲೆಯಲ್ಲಿ ಇಂದು ಕೂಡಾ ಮಹಾಮಾರಿ ಕೊರೊನಾ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಕಿಡ್ನಿ, ಜ್ವರ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.ಬೀದರಿನ ಮಾಂಗರವಾಡಿಯ ನಿವಾಸಿ ಜೂನ್ 13 ರಂದು ಬ್ರೀಮ್ಸ್ ಗೆ ದಾಖಲಾಗಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ತೆಲಂಗಾಣ ಕಂಟಕದಿಂದಾಗಿ ಕೊರೊನಾ ಬಂದಿರಬಹುದು ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಇನ್ನು ಬಸವಕಲ್ಯಾಣ ನಿವಾಸಿ 70 ವರ್ಷದ ವೃದ್ಧ ಮಹಾಮಾರಿಗೆ ಬಲಿಯಾಗಿದ್ದಾರೆ.ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಡೆಡ್ಲಿ ಕೊರೊನಾದ ರುದ್ರ ನರ್ತನ ನೋಡಿ ಜಿಲ್ಲೆಯ ಜನವರು ತೀವ್ರ ಆತಂಕಗೊಂಡಿದ್ದಾರೆ. ಬಸವ ಕಲ್ಯಾಣ, ಭಾಲ್ಕಿ, ಚಿಟ್ಟಗುಪ್ಪ ಹಾಗೂ ಬೀದರ್ ತಾಲೂಕು ಸೇರಿದಂತೆ ಇಂದು ಒಟ್ಟು 10 ಜನರಿಗೆ ಇಂದು ಕೊರೊನಾ ಸೋಂಕು ದೃಢವಾಗಿದೆ.ಇಂದು 10 ಪಾಸಿಟಿವ್ ಕೇಸ್ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ. 411 ಜನ ಸೋಂಕಿತರ ಪೈಕಿ 254 ಗುಣಮುಖರಾಗಿ ಬಿಡುಗಡೆಯಾದ್ದು, 146 ಜನಕ್ಕೆ ಇನ್ನು ಸೋಂಕು ಸಕ್ರಿಯವಾಗಿದೆ. ಇಂದು ಇಬ್ಬರನ್ನು ಬಲಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.Sign in to your account
Username or Email Address


Password

 Remember Me


