ತುಮಕೂರು: ತಾಲೂಕಿನ ಪಾಲಸಂದ್ರ ಪಂಚಾಯತಿ ಅಧ್ಯಕ್ಷೆಯ ರುಕ್ಮಿಣಿ ಅವರ ಪತಿರಾಯ ವೆಂಕಟೇಶ್ ವಿದ್ಯಾರ್ಥಿನಿಯರನ್ನು ಅಶ್ಲೀಲವಾಗಿ ಚುಡಾಯಿಸುತ್ತಾನೆ ಎನ್ನುವ ಆರೋಪ ಕೇಳಿ ಬಂದಿದೆ.ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು, ಮಹಿಳೆಯರು ತನ್ನ ಮುಂದೆ ಹೋಗುತ್ತಿದ್ದರೆ ‘ಹೇ ಬುಲ್ ಬುಲ್’ ಮಾತಾಡಕ್ಕಿಲ್ವಾ ಎಂದು ವೆಂಕೆಟೇಶ್ ಚುಡಾಯಿಸುತ್ತಾನೆ. ಆತನ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ ಎಂದು ಹೊನ್ನೆನಳ್ಳಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.ಸುಂದರ ಹುಡಿಗಿಯರನ್ನು ಕಂಡರೆ ಜೊಲ್ಲು ಸುರಿಸುವ ವೆಂಕಟೇಶ್ “ಕೆಳಗಿಂದ ಮೇಲ್ ತನಕ ನೋಡಪ್ಪಾ… ಒಂದೇ ಸೈಜ್‍ನಲ್ಲಿ ಇದ್ದಾಳೆ” ಎಂದು ಅಶ್ಲೀಲವಾಗಿ ಮಾತನಾಡುತ್ತಾನೆ. ಅಸಭ್ಯವಾಗಿ ಮಾತನಾಡು ವೆಂಕಟೇಶ್ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ಹೊನ್ನೆನಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ದೂರಿದ್ದಾರೆ. ಈ ಸಂಬಂಧ ವೆಂಕಟೇಶ್ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮತ್ತಷ್ಟು ನೊಂದ ಮಹಿಳೆಯರು ಶಾಸಕ ಗೌರಿಶಂಕರ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಮಾಜಿ ಶಾಸಕ ಸುರೇಶ್ ಗೌಡ ಅವರ ಬೆಂಬಲಿಗರಾಗಿರುವ ವೆಂಕಟೇಶ್‍ಗೆ ಸರ್ಕಾರದ ಬೆಂಬಲ ಇದೆ. ಹಾಗಾಗಿ ಅವನು ಆಡಿದ್ದೇ ಆಡವಾಗಿದೆ. ಪೊಲೀಸರು ಅವರನ್ನು ಬಂಧಿಸುತ್ತಿಲ್ಲ ಎಂದು ಶಾಸಕ ಗೌರಿಶಂಕರ್ ಆರೋಪಿಸಿದ್ದಾರೆ. ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಪೊಲೀಸರ ವಿರುದ್ಧ ಎಸ್‍ಪಿ ಕಚೇರಿ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.Sign in to your account
Username or Email Address


Password

 Remember Me


