ಹಾವೇರಿ: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಸಹ 22 ಕೊರೊನಾ ಪ್ರಕರಣಗಳಿವೆ. ಇಷ್ಟಿದ್ದರೂ ಜಾತ್ರೆ ಮಾಡಿ ಎತ್ತಿನ ಬಂಡಿಯ ಓಟ ಆಯೋಜಿಸಿದ ಘಟನೆ ನಡೆದಿದೆ.ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊರೊನಾ ಭೀತಿಯ ನಡುವೆಯೂ ಭರ್ಜರಿಯಾಗಿ ಬಂಡಿ ಓಟ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಬ್ರಹ್ಮಲಿಂಗೇಶ್ವರ ಜಾತ್ರೆ ಆಚರಿಸಿದ್ದು, ಎತ್ತಿನ ಬಂಡಿ ಓಟವನ್ನು ಸಹ ಆಯೋಜಿಸಿದ್ದಾರೆ. ಪ್ರತಿ ವರ್ಷ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ಬಂಡಿ ಓಡಿಸುವ ಸ್ವರ್ದೆ ನಡೆಯುತ್ತಿತ್ತು. ಈ ಬಾರಿ ಕೊರೊನಾ ಹಿನ್ನೆಲೆ ಒಂದೇ ದಿನ ಆಯೋಜಿಸಿದ್ದಾರೆ. ಆದರೂ ಈ ಓಟ ನೋಡಲು ಸಾವಿರಾರು ಜನ ಸೇರಿದ್ದು, ಕೊರೊನಾ ಭೀತಿ ನಡುವೆ ಜಾತ್ರೆ ಮಾಡಿದ್ದಾರೆ.ಕಿಕ್ಕಿರಿದು ಸೇರಿದ್ದ ಜನರ ಸಮ್ಮುಖದಲ್ಲಿ ವೀರಗಾರರು ಭರ್ಜರಿಯಾಗಿ ಬಂಡಿ ಓಡಿಸಿದ್ದಾರೆ. ಜಾತ್ರೆ ಮಾಡಲು ಗ್ರಾಮಸ್ಥರು ತಹಶೀಲ್ದಾರ್ ಶಂಕರ್ ಬಳಿ ಮನವಿ ಸಲ್ಲಿಸಿದರು. ಅದರೆ ಜಾತ್ರೆ ರದ್ದುಪಡಿಸುವಂತೆ ಕೋರಿ ಹಾವೇರಿ ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದಾವುದನ್ನೂ ಲೆಕ್ಕಿಸಿದೆ ಗ್ರಾಮಸ್ಥರು ಭರ್ಜರಿ ಬಂಡಿ ಓಡಿಸುವ ಹಬ್ಬ ಅಚರಣೆ ಮಾಡಿದ್ದಾರೆ.Sign in to your account
Username or Email Address


Password

 Remember Me


