ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ಬಂದಾಗ ಫೇಕ್ ನ್ಯೂಸ್ ಎಂದುಕೊಂಡಿದ್ದೆ. ನನಗೆ ನಂಬಲು ಸಾಧ್ಯವಾಗಿಲ್ಲ ಎಂದು ನಟ ಡಾರ್ಲಿಂಗ್ ಕೃಷ್ಣ, ಚಿರು ಸಾವಿಗೆ ಕಂಬನಿ ಮಿಡಿದಿದ್ದಾರೆ.ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಕೃಷ್ಣ, ಚಿರಂಜೀವಿ ಸರ್ಜಾ ಇನ್ನಿಲ್ಲ ಎಂದು ನನಗೆ ಮೆಸೇಜ್ ಬಂತು. ನಾನು ಇದು ಫೇಕ್ ನ್ಯೂಸ್ ಎಂದುಕೊಂಡೆ. ಆದರೆ 3-4 ಮೆಸೇಜ್ ಬಂತು. ಆಗ ನಾನು ಮತ್ತು ಮಿಲನಾ ಕಥೆ ಮಾಡುತ್ತಿದ್ದೆವು. ಈ ರೀತಿ ಸುದ್ದಿ ಬರುತ್ತಿದೆ ಎಂದು ಹೇಳಿದೆ. ಆ ಕ್ಷಣ ಇಬ್ಬರಿಗೂ ತುಂಬಾ ಶಾಕ್ ಆಯಿತು ಎಂದರು.ಇಷ್ಟು ಚಿಕ್ಕವಯಸ್ಸಿಗೆ ಹೃದಯಾಘಾತ ಎಂದಾಗ ನನಗೆ ನಂಬಲು ಸಾಧ್ಯವಾಗಿಲ್ಲ. ಚಿರು ಅವರ ಮೂರನೇ ಸಿನಿಮಾದಿಂದಲೂ ನನಗೆ ಗೊತ್ತು. ‘ದಂಡಂ ದಶಗುಣಂ’ ಸಿನಿಮಾದಿಂದ ಅವರ ಜೊತೆ ಕೆಲಸ ಮಾಡಿದ್ದೇನೆ. ಅಲ್ಲದೇ ಕೆಲ ಸಿನಿಮಾದಲ್ಲಿ ನಾನು ಅವರ ಜೊತೆ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಈ ಸುದ್ದಿಯನ್ನು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕೃಷ್ಣ ನೋವಿನಿಂದ ಹೇಳಿದರು.https://www.instagram.com/p/CBIp7-hg5jZ/?igshid=go18oxbwi2seಇನ್ನೂ ಮೇಘನಾ, ಧ್ರುವ ಅವರ ಸ್ಥಿತಿ ನೋಡಿದರೆ ತುಂಬಾ ನೋವಾಗುತ್ತದೆ. ಧ್ರುವ ಮತ್ತು ಚಿರಂಜೀವಿ ತುಂಬಾ ಕ್ಲೋಸ್ ಆಗಿದ್ದರು. ಈಗ ಈ ನೋವನ್ನು ಬರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ತುಂಬಾ ಫಿಟ್ ಆಗಿರುವವರಿಗೆ ಈ ರೀತಿ ಆದರೆ ಇನ್ನೂ ಉಳಿದರು ನಮ್ಮ ಸ್ಥಿತಿ ಹೇಗೆ ಎಂದು ಆತಂಕಪಡುತ್ತಾರೆ ಎಂದರು.Sign in to your account
Username or Email Address


Password

 Remember Me


