ಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ನಾನು ಅಣ್ಣ ತಮ್ಮಿಂದರಂತೆ ಇದ್ದೆವು. ನಾವು ಊರು, ಮನೆ, ಮಠ ಬಿಟ್ಟು ಬಂದಾಗ ನಮಗೆ ಆಶ್ರಯ ನೀಡಿದ್ದೇ ಸಿನಿಮಾ ಕುಟುಂಬ. ಎಲ್ಲ ಸಿನಿಮಾಗಳಿಗೂ ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಿದ್ದೆವು ಎಂದು ನಟ ನೀನಾಸಂ ಸತೀಶ್ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.https://www.youtube.com/watch?v=CBAYIvDRUk8ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿನಿಮಾ ರಂಗದಲ್ಲಿ ಅಣ್ಣ ತಮ್ಮಂದಿರಂತೆ ಇದ್ದೆವು. ಕೂತು ಹರಟೆ ಹೊಡೆಯುತ್ತಿದ್ದೆವು. ನಾವು ಊರು ಬಿಟ್ಟು ಬಂದಾಗ ನಮಗೆ ಆಶ್ರಯ ನೀಡಿ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದವರು. ನಂತರ ನಮ್ಮ ಕುಟುಂಬ ಎನ್ನುವಂತೆ ಸಂಬಂಧ ಹೊಂದಿದ್ದೆವು. ಇಷ್ಟು ಸಣ್ಣ ವಯಸ್ಸಿನಲ್ಲಿ ಹೀಗಾಗಿದ್ದು ತುಂಬಾ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.ಚಿರಂಜೀವಿ ಅವರಿಗೆ ಸಿನಿಮಾದಲ್ಲಿ ಸಾಧನೆ ಮಾಡಬೇಕೆಂಬ ಕನಸಿತ್ತು. ಈ ಕುರಿತು ನಾನೂ ಸೇರಿದಂತೆ ಸಮಾನ ವಯಸ್ಕರು ಸೇರಿ ಚರ್ಚೆ ನಡೆಸುತ್ತಿದ್ದೆವು. ಅಲ್ಲದೆ ಚೈತನ್ಯ ನಾನು, ಧೃವ, ಯೋಗಿ ಸೇರಿ ಸಿನಿಮಾ ಮಾಡಲು ಚರ್ಚೆ ನಡೆಸಿದ್ದೆವು. ಇತ್ತೀಚೆಗೆ ರಾತ್ರಿಯಿಂದ ಬೆಳಗ್ಗೆ 5 ಗಂಟೆ ವರೆಗೂ ಚರ್ಚೆ ಮಾಡಿದ್ದೆವು. ಹೀಗೆ ಬಹುತೇಕ ಸಂದರ್ಭಗಳಲ್ಲಿ ಭೇಟಿಯಾಗುತ್ತಿದ್ದೆವು. ಹರಟೆ ಹೊಡೆಯುತ್ತಿದ್ದೆವು ಎಂದು ನೆನೆದಿದ್ದಾರೆ.ಪ್ರತಿ ಸಿನಿಮಾ ಬಂದಾಗ ಅವನಿಗೆ ನಾನು ಶುಭಾಶಯ ತಿಳಿಸುತ್ತಿದ್ದೆ, ನನ್ನ ಸಿನಿಮಾ ಬಂದಾಗ ಅವನು ಶುಭಾಶಯ ತಿಳಿಸುತ್ತಿದ್ದ. ಹೀಗೆ ಅಣ್ಣ ತಮ್ಮಂದಿರಂತೆ ಇದ್ದೆವು, ಈಗ ಈ ಸುದ್ದಿ ಕೇಳಿ ಹೊಟ್ಟೆ ಉರಿಯುತ್ತಿದೆ ಎಂದು ನಿನಾಸಂ ಸತೀಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


