ವಿಜಯಪುರ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಜನ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಬದುವಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಖಾಸಗಿ ಶಾಲೆಯೊಂದು ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದು, ನರ್ಸರಿ ಶಾಲೆಯನ್ನು ಆರಂಭಿಸಿ ಮಕ್ಕಳನ್ನು ಕೂಡಿ ಹಾಕಿದೆ.ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ವಿಜಯಪುರದ ರಹೀಂ ನಗರದಲ್ಲಿರುವ ರೋಜ್ ಲೈನ್ ನರ್ಸರಿ ಸ್ಕೂಲ್ ತರಗತಿಗಳನ್ನು ಆರಂಭಿಸಿದೆ. ಈ ಮೂಲಕ ಶಾಲೆ ತೆರೆಯಲು ಅನುಮತಿ ಇಲ್ಲದಿದ್ದರೂ ಪ್ರಾರಂಭ ಮಾಡಿದೆ. ಪುಟಾಣಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.ಶಾಲೆ ಪ್ರಾರಂಭಿಸಿ ಪೋಷಕರಿಂದ ಹಣ ವಸೂಲಿ ಶುರು ಮಾಡಿದ್ದು, ನರ್ಸರಿ ಶಾಲೆ ತೆರೆದು ಪೋಷಕರ ಬಳಿ ಆಡಳಿತ ಮಂಡಳಿ ಹಣ ಕೇಳುತ್ತಿದೆ. ಒಂದೆಡೆ ಕೊರೊನಾ ಭಯ, ಇನ್ನೊಂದೆಡೆ ಶಿಕ್ಷಣ ಸಂಸ್ಥೆ ಸುಲಿಗೆ ಮಾಡುತ್ತಿದೆ. ಇಷ್ಟಾದರೂ ಶಿಕ್ಷಣ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಈ ವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆಡಳಿತ ಮಂಡಳಿ ಆದೇಶದ ಹಿನ್ನೆಲೆ ಪೋಷಕರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.Sign in to your account
Username or Email Address


Password

 Remember Me


