ಉಡುಪಿ: ಜಿಲ್ಲೆಯಲ್ಲಿ ಹೋಟೆಲ್, ಸರ್ಕಾರಿ ಕ್ವಾರಂಟೈನನ್ನು ಏಳು ದಿನಗಳಿಗೆ ಮೊಟಕು ಮಾಡಿ ವರದಿ ಬರುವ ಮೊದಲೇ ಎಲ್ಲರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಹೋಂ ಕ್ವಾರಂಟೈನ್ ಹೋದವರ ಪೈಕಿ 13 ಜನಕ್ಕೆ ಕೊರೊನಾ ಆವರಿಸಿದೆ. ಇದರಿಂದ ಆತಂಕಗೊಂಡಿರುವ ಸರ್ಕಾರ ಹೊಸ ಆ್ಯಪ್ ಸಿದ್ಧ ಮಾಡಿದ್ದು, ಹೋಂ ಕ್ವಾರಂಟೈನ್‍ನಲ್ಲಿರುವವರ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ.ವಿದೇಶ, ಹೋರ ರಾಜ್ಯದಿಂದ ಬಂದು ಮನೆ ಸೇರಿರುವ 6,000 ಜನರಿದ್ದು, ಎಲ್ಲರೂ ಕ್ವಾರಂಟೈನ್ ವಾಚ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಹೋಂ ಕ್ವಾರಂಟೈನ್ ಇರುವವರ ಮೇಲೆ ವಾಚ್ ಅಪ್ಲಿಕೇಷನ್ ಮೂಲಕ ಜಿಲ್ಲಾಡಳಿತ ಕಣ್ಗಾವಲು ಇಡಲಿದೆ.ತಂತ್ರಜ್ಞಾನದ ಮೊರೆ ಹೋದ ಜಿಲ್ಲಾಡಳಿತ, ಮನೆಯ ಸುತ್ತ ಕ್ವಾರಂಟೈನ್ ಆ್ಯಪ್ ಜೊತೆ ಫೆನ್ಸಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಕ್ವಾರಂಟೈನ್ ಇರುವವರು ಹೊರಗಡೆ ಬಂದ್ರೆ ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ಬರಲಿದೆ. ಮನೆ ಬಿಟ್ಟು ಹೊರಗೆ ಬಂದರೆ ಪ್ರಕರಣ ದಾಖಲು ಮಾಡುವುದಾಗಿ ಡಿಸಿ ಎಚ್ಚರಿಕೆ ನೀಡಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿ ವಿಎ, ಪಿಡಿಒ ಜೊತೆಗೆ ನಿಂತು ಸೆಲ್ಫಿ ರವಾನೆಗೆ ಸೂಚನೆ ಕೊಡಲಾಗಿದೆ.ಸ್ಮಾರ್ಟ್ ಫೋನ್ ಇರುವ ಮನೆಗಳಿಗೆ ಅಪ್ಲಿಕೇಷನ್ ಮೂಲಕ ಮೂಲಕ ಕಾವಲು ಇಟ್ಟಿರುವ ಜಿಲ್ಲಾಡಳಿತ, ಸ್ಮಾಟ್ ಫೋನ್‍ಗಳಿಲ್ಲದ ಮನೆಗಳ ಪಟ್ಟಿಯನ್ನು ನೀಡಿ ಗ್ರಾಮ ಪಂಚಾಯ್ ಮೂಲಕ ನಿಗಾ ವಹಿಸಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಸೂಚನೆ ನೀಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹೊರನಾಡು ಕನ್ನಡಿಗರು ಉಡುಪಿಗೆ ಬಂದವರು 8 ಸಾವಿರಕ್ಕೂ ಹೆಚ್ಚು. 14 ದಿನ ಪೂರೈಸಿದರೂ ವರದಿ ಬಾರದ ಕಾರಣ ಮನೆಗೆ ಕಳುಹಿಸಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಬಹಳ ಒತ್ತಡ ಬಂತು. ಮನೆಯಲ್ಲಿ ಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ. ಪಾಸಿಟಿವ್ ಬಂದವರನ್ನು ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತದೆ ಎಂದರು.Sign in to your account
Username or Email Address


Password

 Remember Me


