ಬೆಂಗಳೂರು: ಕೋವಿಡ್ 19 ನಿಂದಾಗಿ ಶಾಸಕರ ಸಂಬಳಕ್ಕೂ ಈಗ ಸರ್ಕಾರ ಕತ್ತರಿ ಹಾಕಿದೆ. ಸಂಬಳ ಕಡಿತದ ಬಗ್ಗೆ ಅಧಿಕೃತವಾಗಿ ಇಂದು ಸ್ಪಷ್ಟೀಕರಣ ನೀಡಿದೆ.ಏಪ್ರಿಲ್ 1 ರಿಂದ ಒಂದು ವರ್ಷ ಅವಧಿಗೆ ಶೇ.30ರಷ್ಟು ಶಾಸಕರ ಸಂಬಳ ಕಡಿತವಾಗಲಿದೆ. ಶಾಸಕರ ವೇತನ, ಪಿಂಚಣಿ, ಇತರೆ ಭತ್ಯೆ, ದೂರವಾಣಿ ವೆಚ್ಚ, ಚುನಾವಣೆ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗಧಿತ ವಿಮಾನ, ರೈಲ್ವೆ ಪ್ರಯಾಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತ ಮಾಡಲಾಗಿದೆ. ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಸಭೆಗೆ ಹಾಜರಾಗಲು ದಿನ ಭತ್ಯೆ, ಪ್ರಯಾಣ ಭತ್ಯೆ, ವಾಹನ ಭತ್ಯೆ ಇವುಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಶೇ.30% ಕಡಿತ ಮಾಡಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಆದೇಶ ನೀಡಿದೆ.ಮುಖ್ಯಮಂತ್ರಿಗಳಿಗೆ ಸಂಬಳ ಎಷ್ಟಿದೆ?
ಸಂಬಳ – 50 ಸಾವಿರ ರೂ.ಮಾಸಿಕ
ಅತಿಥ್ಯ ಭತ್ಯೆ – 3 ಲಕ್ಷ ಸಾವಿರ ರೂ.
ವಾಹನ ಭತ್ಯೆ – 1 ಸಾವಿರ ಲೀಟರ್
ಮನೆ ಬಾಡಿಗೆ – 80 ಸಾವಿರಸಂಪುಟ ದರ್ಜೆ ಸಚಿವರು
ಸಂಬಳ – 40 ಸಾವಿರ ರೂ.
ಅತಿಥ್ಯ ಭತ್ಯೆ – 3 ಲಕ್ಷ ರೂ.
ವಾಹನ ಭತ್ಯೆ – 1 ಸಾವಿರ ಲೀಟರ್
ಮನೆ ಬಾಡಿಗೆ – 80 ಸಾವಿರ ರೂ.ಶಾಸಕರು
ಸಂಬಳ – 25 ಸಾವಿರ ರೂ.
ಕ್ಷೇತ್ರ ಪ್ರಯಾಣ ಭತ್ಯೆ – 40 ಸಾವಿರ ರೂ.
ದೂರವಾಣಿ ವೆಚ್ಚ – 20 ಸಾವಿರ ರೂ.
ಕ್ಷೇತ್ರ ಭತ್ಯೆ – 40 ಸಾವಿರ ರೂ.
ಪ್ರಯಾಣ ಭತ್ಯೆ ಪ್ರತಿ ಕಿ.ಮೀ.25 ರೂ. ಹೆಚ್ಚಳ
ಹೊರ ರಾಜ್ಯ ಭತ್ಯೆ – 2 ಸಾವಿರ ರೂ
ಔಷಧಿ ಭತ್ಯೆ – 5 ಸಾವಿರ ರೂ.Sign in to your account
Username or Email Address


Password

 Remember Me


