ಚಾಮರಾಜನಗರ: ಕೊರೊನಾ ಸೋಂಕಿತ ಸಿಡಿಪಿಒ ಅಧಿಕಾರಿ ನಂಜನಗೂಡು ತಾಲೂಕು ಹೆಳವರಹುಂಡಿಯಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿರಲಿಲ್ಲ ಹಾಗೂ ಚಾಮರಾಜನಗರ ಜಿಲ್ಲೆಯ ಸೋಮವಾರಪೇಟೆಯ ಯಾರು ಸಹ ಆತನ ಸಂಪರ್ಕಕ್ಕೆ ಬಂದಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟಪಡಿಸಿದ್ದಾರೆ.ಸೋಂಕಿತ ಅಧಿಕಾರಿ ಹೆಳವರಹುಂಡಿಯ ತಮ್ಮ ಅಜ್ಜಿಯ ಮನೆಗೆ ಬಂದಿದ್ದರು ಅಷ್ಟೇ. ಅವರು ಹೆಳವರಹುಂಡಿಯಲ್ಲಿ ನಿನ್ನೆ ನಡೆದ ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ ಮದುವೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲೆಯ ಸೋಮವಾರಪೇಟೆ ನಿವಾಸಿಗಳು ಅವರ ಪ್ರಾಥಮಿಕ ಸಂಪರ್ಕ ಹೊಂದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಕೆರೆಹಳ್ಳಿಯಲ್ಲಿ ಮೀನು ಖರೀದಿಸಿದ್ದು ಸೋಂಕಿತ ಅಧಿಕಾರಿಯಲ್ಲ. ಬದಲಾಗಿ ಅವರದ್ದೇ ಹೆಸರಿನ ಅವರ ಸಂಬಂಧಿ. ಯಾರು ಆತಂಕಕ್ಕೆ ಒಳಗಾಗಬಾರದು. ಮದುವೆಯಲ್ಲಿ ಪಾಲ್ಗೊಂಡಿದ್ದ ಚಾಮರಾಜನಗರದ ಸೋಮವಾರಪೇಟೆಯ ನಿವಾಸಿಗಳು ಕ್ಷೇಮವಾಗಿದ್ದು, ಯಾರು ಸಹ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದ್ದಾರೆ.Sign in to your account
Username or Email Address


Password

 Remember Me


