ಬೆಂಗಳೂರು: ನಗರದ ಹಲಸೂರಿನಲ್ಲಿ ಭಾರೀ ಹೈಡ್ರಾಮವೊಂದು ನಡೆದಿದೆ. ಬಾಂಬೆಯಿಂದ ಬಂದ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಿಲ್ಲ ಎಂಬ ಆಶಾ ಕಾರ್ಯಕರ್ತೆಯ ಮೆಸೇಜೊಂದು ಭಾರೀ ಸದ್ದು ಮಾಡಿದೆ. ಅಲ್ಲದೆ ಜನ ಆರೋಗ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.ಆಗಿದ್ದೇನು..?:
ಹಲಸೂರಿನಲ್ಲಿ ವಾಸವಿರುವ ವ್ಯಕ್ತಿ ಎರಡು ದಿನದ ಹಿಂದೆ ಮುಂಬೈನಿಂದ ವಾಪಸ್ ಬಂದಿದ್ದಾರೆ. ಆದರೆ ಕ್ವಾರಂಟೈನ್ ಆಗಿಲ್ಲ ಎಂದು ಸುದ್ದಿಯಾಗಿತ್ತು. ಅಲ್ಲದೆ ಆಶಾ ಕಾರ್ಯಕರ್ತೆಯ ಒಂದು ಮೆಸೇಜ್ ಕೂಡ ಹರಿದಾಡಿತ್ತು. ಹೀಗಾಗಿ ಈ ವ್ಯಕ್ತಿಯ ಮನೆ ಮುಂದೆ ಹೈಡ್ರಾಮವೇ ನಡೆದಿತ್ತು.ಸ್ಥಳೀಯರ ಭಯಕ್ಕೆ ಬಾಂಬೆಯಿಂದ ಬಂದಿದ್ದಾರೆ ಎನ್ನಲಾಗಿದ್ದ ವ್ಯಕ್ತಿಯನ್ನು ಹಲಸೂರಿನ ಆಸ್ಪತ್ರೆಯ ಬಳಿಗೆ ಕರೆದುಕೊಂಡು ಬಂದಿದ್ದಾರೆ. ಈ ವ್ಯಕ್ತಿ ನಾನು ಬಾಂಬೆಯಿಂದ ಬಂದಿಲ್ಲ ಎಂದು ವಾದ ಮಾಡಿದರೆ, ಆಸ್ಪತ್ರೆಯ ಮುಂದೆ ಜಮಾಯಿಸಿರುವ ಜನ ಈತನಿಗೆ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಕೊನೆಗೆ ಆತನಿಗೆ ಜ್ವರ ಇದೆಯಾ ಎಂದು ಟೆಸ್ಟ್ ಮಾಡಿ ಈತನಿಗೆ ಬಾಂಬೆ ಹಿಸ್ಟರಿ ಇಲ್ಲ ಎಂದು ಆಸ್ಪತ್ರೆಯವರು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


