ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಶಾಸಕ ರಾಮದಾಸ್ ಸಭೆಯಲ್ಲಿ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದಾರೆ.ಕಸ ವಿಲೇವಾರಿ ಘಟಕ ಸೂಯೇಜ್ ಫಾರಂ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮುಂದೆ ಜಟಾಪಟಿ ಮಾಡಿಕೊಂಡಿದ್ದಾರೆ. ಘಟಕದ ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಸೂಯೇಜ್ ಫಾರಂ ಕಸ ವಿಲೇವಾರಿಗೆ ವರ್ಕ್ ಆರ್ಡರ್ ಆಗಿದೆ ಎಂದು ಪ್ರತಾಪ್ ಸಿಂಹ ವಾದಿಸಿದರು. ಆಗ ಆರ್ಡರ್ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಅಂತ ರಾಮದಾಸ್ ಅಸಮಾಧಾನ ತೋರಿದರು. ಈ ವೇಳೆ ಸಭೆಯಲ್ಲೇ ಮಾತಿನ ಚಕಮಕಿ ನಡೆಯಿತು.ಯೋಜನೆಗೆ ರಾಜ್ಯ ಸರ್ಕಾರದ ಹಣ ಬೇಕಿಲ್ಲ ಅಂತಾ ಪ್ರತಾಪ್ ಸಿಂಹ ಹೇಳಿದ್ದಕ್ಕೆ ಯೋಜನೆಯನ್ನು ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿ ಅಂತ ರಾಮದಾಸ್ ಸಚಿವರನ್ನು ಒತ್ತಾಯಿಸಿದರು.ರಾಮದಾಸ್ ಮಾತಿಗೆ ಅಪಸ್ವರ ಎತ್ತಿದ ಸಂಸದ, ಮತ್ತೆ ಯೋಜನೆ ಆರಂಭಿಸುವ ಅಗತ್ಯವಿಲ್ಲ ಅಂತ ಹೇಳಿದರು. ಆಗ ರಾಮದಾಸ್ ಕೋಪಗೊಂಡು ಸಭೆಯಲ್ಲಿ ಮಾತಾಡಿದರು. ಮುಖ ತಿರಗಿಸಿಕೊಂಡು ಸಭೆಯಲ್ಲಿ ಇಬ್ಬರು ವಾಕ್ಸಮರ ಮಾಡಿದರು. ಸಚಿವರಾದ ಭೈರತಿ ಬಸವರಾಜ್ ಮತ್ತು ಎಸ್.ಟಿ.ಸೋಮಶೇಖರ್ ಈ ವಾಕ್ಸಮರಕ್ಕೆ ಸಾಕ್ಷಿಯಾದರು.Sign in to your account
Username or Email Address


Password

 Remember Me


