ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಆಶಾ ಕಾರ್ಯಕರ್ತೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ನಡೆದಿದೆ.ಗಂಗಹಳ್ಳಿ ಗ್ರಾಮದ ಆಶಾಕಾರ್ಯಕರ್ತೆ ರವಣಮ್ಮ ಹಾಗೂ ಪತಿ ನರಸಿಂಹಮೂರ್ತಿ ಹಲ್ಲೆಗೊಳಗಾದವರು. ಸರ್ವೆ ಕಾರ್ಯ ಮುಗಿಸಿದ್ದ ಆಶಾಕಾರ್ಯಕರ್ತೆ ತನ್ನ ಸ್ನೇಹಿತೆ ಪೂಲಕುಂಟ್ಲಹಳ್ಳಿ ಗ್ರಾಮದ ಗಿರಿಜಮ್ಮ ಮನೆಗೆ ಬಂದಿದ್ರು. ಇತ್ತ ಪತ್ನಿ ರವಣಮ್ಮರನ್ನು ಕರೆದೊಯ್ಯಲು ಪತಿ ನರಸಿಂಹಮೂರ್ತಿ ಪೂಲಕುಂಟ್ಲಹಳ್ಳಿಗೆ ಬಂದಿದ್ದಾರೆ.ಈ ಸಂದರ್ಭದಲ್ಲಿ ಮದ್ಯ ಸೇವಿಸಿ ಅಮಲಿನಲ್ಲಿದ್ದ ಇದೇ ಗ್ರಾಮದ ಕೇಶವ ಎಂಬಾತ ಕ್ಷುಲ್ಲಕ ಕಾರಣಕ್ಕೆ ನರಸಿಂಹಮೂರ್ತಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಕಲ್ಲಿನಿಂದ ತಲೆಗೆ ಹೊಡೆದಿದ್ದು ರಕ್ತಸ್ರಾವವಾಗಿದೆ. ವಿಷಯ ತಿಳಿದು ಗಂಡನ ರಕ್ಷಣೆಗೆ ಬಂದ ಆಶಾಕಾರ್ಯಕರ್ತೆ ರವಣಮ್ಮನನ್ನು ಕೂಡ ತಳ್ಳಾಡಿ ನೂಕಾಡಿ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಲಾಗಿದೆ.ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಹಲ್ಲೆಗೊಳಗಾದವರು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.Sign in to your account
Username or Email Address


Password

 Remember Me


