ವಿಜಯಪುರ: ಕೇಂದ್ರ ಸರ್ಕಾರ ಅಂತರ್ ಜಿಲ್ಲೆಗಳಲ್ಲಿ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮತಮ್ಮ ಜಿಲ್ಲೆಗಳಿಗೆ ಮರಳಿದ್ದಾರೆ.ಭಾರತ ಲಾಕಡೌನ್ ಆದ ಹಿನ್ನೆಲೆಯಲ್ಲಿ 33 ಜನ ವಲಸೆ ಕಾರ್ಮಿಕರು ವಿಜಯಪುರದಲ್ಲಿ ಸಿಲುಕಿದ್ದರು. ವಿಜಯಪುರ ನಗರದ ಕಾಕಾ ಕಾರ್ಖಾನೀಸ್ ಸಮುದಾಯ ಭವನದಲ್ಲಿ ಕಾರ್ಮಿಕರು ಉಳಿದಿಕೊಂಡಿದ್ದರು. ಇವರಿಗೆ ವಿಜಯಪುರ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿತ್ತು.ಕೇಂದ್ರ ಸರ್ಕಾರ ಅಂತರ್ ಜಿಲ್ಲೆಗಳಲ್ಲಿ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದೆ. ಹೀಗಾಗಿ ವಿಜಯಪುರ ಜಿಲ್ಲಾಡಳಿತ ಏಳು ನಾನಾ ವಾಹನಗಳಲ್ಲಿ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿ ಕೊಟ್ಟಿದೆ. ಅಷ್ಟೇ ಅಲ್ಲದೇ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಉಸ್ತುವಾರಿಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ.ವಿಜಯಪುರ ಜಿಲ್ಲಾಡಳಿತ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಪ್ರಮಾಣ ಪತ್ರ, ಸಂಚಾರಕ್ಕೆ ಪಾಸ್, ವಾಹನ ವ್ಯವಸ್ಥೆ ಮಾಡಿದೆ. ಶಿವಮೊಗ್ಗ, ಉಡುಪಿ, ರಾಮನಗರ ಮೂಲದ 33 ಜನ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಿದ್ದಾರೆ.Sign in to your account
Username or Email Address


Password

 Remember Me


