ಬೆಂಗಳೂರು: ಲಾಕ್‍ಡೌನ್ ಶುರುವಾದಗಿನಿಂದ ಅನೇಕರು ತಮ್ಮ ಮನೆಗಳಿಗೆ ಹೋಗಲು ಸಾಧ್ಯವಾಗದೇ ಎಲ್ಲಿ ಉಳಿದುಕೊಂಡಿದ್ದರೋ ಅಲ್ಲಿಯೇ ಇದ್ದಾರೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಅವರು ಕೂಡ ಹೊಟೇಲೊಂದರಲ್ಲಿ ಸಿಲುಕಿಕೊಂಡಿದ್ದಾರೆ.ಲಾಕ್‍ಡೌನ್‍ನಲ್ಲಿ ಕಳೆದ 22 ದಿನಗಳಿಂದ ನಟಿ ಜಯಂತಿ ಸಿಲುಕಿಕೊಂಡಿದ್ದಾರೆ. ಕಳೆದ ಮಾರ್ಚ್ 22 ರಂದು ವಿಶ್ವ ವಿಖ್ಯಾತ ಹಂಪಿ ದೇವಸ್ಥಾನ ನೋಡಲು ಕುಟುಂಬ ಸಮೇತ ಜಯಂತಿ ಹಂಪಿಗೆ ತೆರಳಿದ್ದರು. ಆಗ ಕರ್ನಾಟಕದಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ವ್ಯಾಪಿಸಿರಲಿಲ್ಲ.ಆದರೆ ಜಯಂತಿ ಕುಟುಂಬ ಪ್ರವಾಸದಲ್ಲಿದ್ದಾಗಲೇ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲು ಸರ್ಕಾರ ಆದೇಶಿಸಿತ್ತು. ಹೀಗಾಗಿ ಹೊಸಪೇಟೆಯಲ್ಲಿರುವ ಖಾಸಗಿ ಹೊಟೇಲ್‍ವೊಂದರಲ್ಲಿ ಜಯಂತಿ ಹಾಗೂ ಕುಟುಂಬ ಉಳಿದುಕೊಂಡಿದ್ದರು. ಅಲ್ಲಿಗೆ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಲಾಕ್‍ಡೌನ್ ಆದ ನಂತರ ಜಯಂತಿ ಕುಟುಂಬ ಬೆಂಗಳೂರಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಂದಿನಿಂದ ಹೊಟೇಲ್‍ನಲ್ಲಿಯೇ ಇದ್ದರು. ಇಂದು 21 ದಿನದ ಲಾಕ್‍ಡೌನ್ ಮುಗಿದಿದ್ದು, ಬೆಂಗಳೂರಿಗೆ ವಾಪಸ್ ಬರಬಹುದು ಎಂದುಕೊಂಡಿದ್ದರು. ಆದರೆ ಪ್ರಧಾನಿ ಮೋದಿ ಅವರು ಇಂದು ಮತ್ತೆ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿ ಅಧಿಕೃತವಾಗಿ ಫೋಷಣೆ ಮಾಡಿದ್ದಾರೆ.ಹೀಗಾಗಿ ಇನ್ನೂ 19 ದಿನಗಳ ಕಾಲ ಹೊಟೇಲ್‍ನಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಮೇ 3ರ ಬಳಿಕ  ಲಾಕ್‍ಡೌನ್ ಸಡಿಲವಾದರೆ  ಜಯಂತಿ ಕುಟುಂಬ ಬೆಂಗಳೂರಿಗೆ ಬರುವ ನಿರೀಕ್ಷೆಯಲ್ಲಿದ್ದಾರೆ.Sign in to your account
Username or Email Address


Password

 Remember Me


