ಬೆಂಗಳೂರು: ಶೈಕ್ಷಣಿಕ ಕ್ಷೇತ್ರ ಮತ್ತು ಮಗುವಿನ ಅಭಿವೃದ್ಧಿ ಜೊತೆಗೆ ಸಮಾಜದ ಸಮಾನತೆಗೆ ಶಿಕ್ಷಣ ಇಲಾಖೆ “ಸುಸ್ಥಿರ ಅಭಿವೃದ್ದಿ ಮಿಷನ್ 2030” ನೂತನ ಕಾರ್ಯಕ್ರಮ ಅಳವಡಿಸಿಕೊಂಡಿದೆ. ರಾಜ್ಯದ ಪ್ರತಿ ಶಾಲೆಯಲ್ಲಿ ಮಗುವಿನ ಸುಸ್ಥಿರ ಅಭಿವೃದ್ಧಿ, ಮಗುವಿನ ವಿಕಸನವನ್ನ ಶಾಲೆ ಮಟ್ಟದಲ್ಲಿ ರೂಪಿಸುವುದು ಈ ಮಿಷನ್ ನ ಪ್ರಮುಖ್ಯ ಧ್ಯೆಯವಾಗಿದೆ.ವಿಶ್ವಸಂಸ್ಥೆಯು ಮಂಡಿಸಿರೋ ಈ ಸುಸ್ಥಿರ ಅಭಿವೃದ್ಧಿಗೆ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಒಪ್ಪಿಕೊಂಡಿವೆ. ಇದನ್ನ ಅಳವಡಿಸಿಕೊಳ್ಳುವ ಕೆಲಸ ಮಾಡ್ತಿದೆ. ಭಾರತ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವೂ ಈ ಸುಸ್ಥಿರ ಅಭಿವೃದ್ಧಿಯನ್ನ 2030ರ ವೇಳೆಗೆ ಸಾಕಾರ ಮಾಡಲು ಮಿಷನ್ 2030 ಯೋಜನೆ ಆರಂಭಿಸಿದೆ.ಸುಸ್ಥಿರ ಅಭಿವೃದ್ಧಿ ಎಂದರೇನು?
ಸ್ವಾಭಾವಿಕವಾಗಿ ಸಿಗುವ ಮತ್ತು ಮಾನವ ನಿರ್ಮಿತ ಸಂಪನ್ಮೂಲಗಳನ್ನ ನಮಗೆ ಬೇಕಾದಷ್ಟು ಬಳಸಿಕೊಂಡು, ಬೇರೆ ಅವರಿಗೂ ಇದನ್ನು ಹಂಚೋದು ಇದರ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆ ಸುಸ್ಥಿರ ಅಭಿವೃದ್ಧಿ ಎಂದರೆ ಬೆಳೆಸು, ಬಳಸು, ಉಳಿಸು ಅನ್ನೋದಾಗಿದೆ.ರಾಜ್ಯ ಸರ್ಕಾರ ಸುಸ್ಥಿರ ಅಭಿವೃದ್ಧಿಯನ್ನ ಶಾಲೆಗಳಲ್ಲಿ ಅಳವಡಿಸಲು ಮುಂದಾಗಿದೆ. ಶಾಲೆಗಳಲ್ಲಿ ಇದನ್ನ ಮಕ್ಕಳಿಗೆ ಅರ್ಥೈಸುವ ಮೂಲಕ ಮಗು ವಿಕಸನಕ್ಕೆ ಅನುಕೂಲ ಮಾಡಿಕೊಡೋದು ಇದರ ಉದ್ದೇಶ ಆಗಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ 17 ಗುರಿಗಳನ್ನು ಹಾಕಿಕೊಳ್ಳಲಾಗಿದೆ. ಬಡತನದಿಂದ ಮುಕ್ತ, ಹಸಿವು ಮುಕ್ತ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗಸಮಾನತೆ, ಸ್ಚಚ್ಚ ನೀರು ನೈರ್ಮಲ್ಯ ಹೀಗೆ 17 ಅಂಶಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ಅಗತ್ಯತೆಗಳನ್ನು ಪರಿಚಯಿಸಿ ಮುಂದೆ ಸಮ ಸಮಾಜದ ನಿರ್ಮಾಣವೇ ಇದರ ಗುರಿಯಾಗಿದೆ.Sign in to your account
Username or Email Address


Password

 Remember Me


