ಕೊಪ್ಪಳ: ಭಾವನಾತ್ಮಕವಾಗಿ ಮತ್ತು ಕೆರಳಿಸುವಂತ ರಾಜಕಾರಣ ಮಾಡುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬಹಳ ದಿನ ರಾಜಕಾರಣದಲ್ಲಿ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.ಕೊಪ್ಪಳದಲ್ಲಿ ಮಾತನಾಡಿದ ಅವರು, ಮೋದಿ ಶಾ ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಇಂಥವರು ಜಗತ್ತಿನಲ್ಲಿ ಬಹಳ ದಿನ ಬದುಕಿಲ್ಲ. ಇವರಿಗೂ ಅದೇ ಪರಸ್ಥಿತಿ ಬರುತ್ತದೆ. ಅದನ್ನು ನಮ್ಮ ಕಣ್ಣಾರೆ ನೋಡ್ತೀವಿ, ದೇಶದ ಜನ ಬಹಳ ಬುದ್ಧಿವಂತರಿದ್ದಾರೆ ಎಂದು ಕಿಡಿ ಕಾರಿದರು.ಭಾವನಾತ್ಮಕವಾಗಿ ರಾಜಕಾರಣ ಮಾಡುವವರಿಗೆ ಬಹಳ ದಿನ ಆಯುಷ್ಯ ಇಲ್ಲ. ಇದನ್ನು ಮೋದಿ, ಶಾ ಅರ್ಥ ಮಾಡಿಕೊಳ್ಳಬೇಕು ಎಂದು ತಂಗಡಗಿ ವಾಗ್ದಾಳಿ ನೆಡಸಿದರು.Sign in to your account
Username or Email Address


Password

 Remember Me


