ದಾವಣಗೆರೆ: ಸದಾ ಸುದ್ದಿಯಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಈಗ ಸಾರಿಗೆ ಬಸ್ ಚಾಲನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಿಂದ ಉಜನಿಪುರ, ರಾಂಪುರ ಸೇರಿದಂತೆ ಹಲವು ಗ್ರಾಮಗಳಿಗೆ ಇಂದು ಹೊಸದಾಗಿ ಸಾರಿಗೆ ಬಸ್ ಗೆ ಚಾಲನೆ ನೀಡಿದರು. ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ರೇಣುಕಾಚಾರ್ಯ ಸ್ವತಃ ತಾವೇ ಚಾಲಕನ ಯೂನಿಫಾರಂ ಹಾಕಿ ಬಸ್ ಚಲಾಯಿಸಿದರು. ಶಾಸಕರ ಬಸ್ ಚಲಾಯಿಸುತ್ತಿದ್ದಂತೆ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕುತ್ತ ಹೊನ್ನಾಳಿ ಹುಲಿ ರೇಣುಕಾಚಾರ್ಯಗೆ ಜಯವಾಗಲಿ ಎಂದು ಜೈಕಾರ ಹಾಕಿದರು.ಪ್ರವಾಹ ಸಂದರ್ಭ ನಿಂತ ನೀರಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿ ವಿವಾದ ಮೇಲೆಳೆದುಕೊಂಡಿದ್ದರು. ಈ ಬಾರಿ ಚಾಲಕನ ಯೂನಿಫಾರಂ ಹಾಕಿಕೊಂಡು ಬಸ್ ಚಾಲನೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.Sign in to your account
Username or Email Address


Password

 Remember Me


