ಬೆಂಗಳೂರು: ಇವತ್ತು ಎಸ್.ಎಂ.ಕೃಷ್ಣ ಅವರ ಕುರಿತ ಗ್ರಂಥಗಳು ಬಿಡುಗಡೆ ಮಾಡಲಾಯ್ತು. ಬಿಡುಗಡೆ ಸಮಾರಂಭದಲ್ಲಿ ಮಾತ್ರ ಸಾಕಷ್ಟು ಸ್ವಾರಸ್ಯಕರ ವಿಚಾರಗಳು ಹೊರ ಬಂದವು. ಗ್ರಂಥಗಳನ್ನ ಬಿಡುಗಡೆಗೊಳಿಸಿ ಮಾತನಾಡಿದ ಸುಪ್ರೀಂಕೋರ್ಟ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಎಸ್ ಎಂಕೆ ವ್ಯಕ್ತಿತ್ವ, ಆಕರ್ಷಣೆಯ ಬಗ್ಗೆ ವರ್ಣಿಸಿದ್ದು ವಿಶೇಷವಾಗಿತ್ತು. ಅದೇ ಕೃಷ್ಣ ಹಿಂದೆ ರೂಪವತಿಯರ ಕ್ಯೂ ಸ್ಟೋರಿ.ಅಂದಹಾಗೆ ಎಸ್ ಎಂಕೆ ಹ್ಯಾಂಡ್ಸಮ್ ಆಂಡ್ ಚಾರ್ಮಿಂಗ್ ಹುಡುಗ. ಬಹಳಷ್ಟು ಹೆಣ್ಮಕ್ಕಳು ಎಸ್ ಎಂಕೆ ಹಿಂದೆ ಬೀಳೋದು ಸಾಮಾನ್ಯವಾಗಿತ್ತಂತೆ. ಒಂದು ಬಾರಿ ಅಮೆರಿಕದಲ್ಲಿ ಇದ್ದಾಗ ಸಾಕಷ್ಟು ರೂಪವತಿಯರು ಹಿಂದೆ ಬೀಳ್ತಿದ್ರಂತೆ. ಸ್ವತಃ ಎಸ್ ಎಂಕೆ ಪುಸ್ತಕದಲ್ಲಿ ಹೇಳಿಕೊಳ್ಳುವ ಪ್ರಕಾರ ಅಷ್ಟು ರೂಪವತಿಯರು ಹಿಂದೆ ಬಿದ್ದಿದ್ರೂ ಲಕ್ಷ್ಮಣ ರೇಖೆ ದಾಟುತ್ತಿರಲಿಲ್ಲ ಅಂದಿದ್ದಾರೆ.ಆದ್ರೆ ಎಸ್ ಎಂಕೆ ಜಾಣ್ಮೆಯ ಮಾತನ್ನ ಸಮಾರಂಭದಲ್ಲಿ ವೆಂಕಟಾಚಲಯ್ಯ ಅವರು ಬಹಳ ಸೊಗಸಾಗಿ ವರ್ಣಿಸಿದ್ರು. ರೂಪವತಿಯರು ಹಿಂದೆ ಬೀಳ್ತಿದ್ರೂ ನಾನು ಲಕ್ಷ್ಮಣ ರೇಖೆ ದಾಟುತ್ತಿರಲಿಲ್ಲ ಅಂತೇಳಿದ್ದಾರೆ ಸರಿ. ಆದ್ರೆ ಎಸ್ ಎಂಕೆ ಬಹಳ ಇಂಟಲಿಜೆಟ್. ಹಿಂದೆ ಬೀಳುತ್ತಿದ್ದ ಆ ರೂಪವತಿಯರು ಲಕ್ಷ್ಮಣ ರೇಖೆ ದಾಟಿಲ್ಲ ಅಂತಾ ಹೇಳಿಲ್ಲ ಅವರು ಅಂತಾ ಹಾಸ್ಯಭರಿತ ಮಾತುಗಳನ್ನಾಡಿದರು. ವೆಂಕಟಾಚಲಯ್ಯ ಅವರ ಮಾತಿಗೆ ಎಸ್ ಎಂಕೆ, ಪ್ರೇಮಾ ಕೃಷ್ಣ ಸೇರಿದಂತೆ ಇಡೀ ಸಭಾಂಗಣ ನಗೆಗಡಲಿಲ್ಲಿ ತೇಲಿದ್ದು ವಿಶೇಷವಾಗಿತ್ತು.


 Advertisement 







 Advertisement 




Sign in to your account
Username or Email Address


Password

 Remember Me


