ಬೆಂಗಳೂರು: ಮನೆಗೆ ಹೋಗಿ ಬಂದು ಮಾತನಾಡುವ ಕೆಲವರಿಂದಲೇ ಸಿಎಂ ಬಿಎಸ್ ಯಡಿಯೂರಪ್ಪರಿಗೆ ತೊಂದರೆನಾ? ಯಡಿಯೂರಪ್ಪ ಮನೆಗೆ ಹೋಗುವ ಆಪ್ತ ಶಾಸಕರು ಬಳಿಕ ಮಾತನಾಡಿದ್ರೆ ವಿವಾದ ಆಗುತ್ತಾ? ಈ ಪ್ರಶ್ನೆಗಳಿಗೆ ಯಡಿಯೂರಪ್ಪ ಆಪ್ತ ವಲಯ ಹೌದು ಎನ್ನುತ್ತಿದೆ. ಅದಕ್ಕಾಗಿಯೇ ಯಡಿಯೂರಪ್ಪ ಗರಂ ಆಗಿ ವಾರ್ನಿಂಗ್ ಕೂಡ ಮಾಡಿದ್ದಾರೆ ಎನ್ನಲಾಗಿದೆ.ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ಮಾಡಿಕೊಂಡು ಬಂದ ಬಳಿಕ ಮಾಧ್ಯಮಗಳಿಗೆ ಮಾತನಾಡುವುದರಿಂದ ತೊಂದರೆ ಆಗುತ್ತಿದೆಯಂತೆ. ಡಿಸಿಎಂ ಹುದ್ದೆ ವಿವಾದ ಸೇರಿದಂತೆ ಹಲವು ವಿವಾದಗಳು ಯಡಿಯೂರಪ್ಪನವರ ಮೇಲೆ ಪರಿಣಾಮ ಬೀರುತ್ತಿವೆ ಎನ್ನಲಾಗಿದೆ. ಯಡಿಯೂರಪ್ಪ ನಿವಾಸದ ಬಳಿ ಕೆಲ ಆಪ್ತರು ಮಾತನಾಡಿ ವಿವಾದ ಸೃಷ್ಟಿಸಿದ್ರೆ, ಇದರ ಹಿಂದೆ ಸಿಎಂ ಇದ್ದಾರೆ ಅನ್ನೋ ಭಾವನೆ ಬರುತ್ತೆ. ಹಾಗಾಗಿಯೇ ಕೆಲ ಆಪ್ತ ಶಾಸಕರ ವಿರುದ್ಧ ಯಡಿಯೂರಪ್ಪ ಫುಲ್ ಗರಂ ಆಗಿದ್ದಾರೆ.ನನ್ನ ಮನೆಗೆ ಬಂದು ಹೋಗಿ ವಿವಾದ ಮಾಡಬೇಡಿ. ನನ್ನ ಜತೆ ಮಾತಾಡಿಯೇ ಹೋಗಿ ವಿವಾದ ಮಾಡುತ್ತಿದ್ದಾರೆ ಅನ್ನೋ ಭಾವನೆ ಬರುತ್ತಿದೆ. ಇದರಿಂದ ನನ್ನ ರಾಜಕೀಯ ನಿರ್ಧಾರಗಳ ಮೇಲೂ ಪರಿಣಾಮ ಬೀರುತ್ತಿದೆ. ದಯಮಾಡಿ ನನ್ ಮನೆಗೆ ಬಂದು ವಿವಾದ ಎಬ್ಬಿಸಬೇಡಿ ಎಂದು ಕೆಲ ಆಪ್ತರ ಮೇಲೆ ಸಿಟ್ಟಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ವಾರ್ನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕೆಲ ದಿನಗಳ ಹಿಂದೆ ಡಿಸಿಎಂ ವಿಚಾರದಲ್ಲಿ ಶಾಸಕ ರೇಣುಕಾಚಾರ್ಯ ಮಾತಾಡಿದ್ದು, ಪಕ್ಷದ ಕೆಲ ವಿಚಾರವಾಗಿ, ನೆರೆ ಪರಿಹಾರ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಿದ್ದು ಬಿಜೆಪಿ ವಲಯದಲ್ಲಿ ವಿವಾದ ಸೃಷ್ಟಿಸಿತ್ತು. ಇದರ ಹಿಂದೆ ಯಡಿಯೂರಪ್ಪ ಅವರೇ ಇದ್ದಾರೆ ಎಂದು ಬಿಂಬಿಸಲಾಗಿತ್ತು. ಇದು ಸಹಜವಾಗಿಯೇ ಯಡಿಯೂರಪ್ಪ ಅವರ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಆಪ್ತರ ವಿರುದ್ಧ ಗರಂ ಆಗಿ ವಾರ್ನ್ ಮಾಡಿರೋದು ಅನ್ನೋ ಮಾತುಗಳು ಕೇಳಿ ಬಂದಿವೆ.Sign in to your account
Username or Email Address


Password

 Remember Me


