ಬೀದರ್: ಶಿಕ್ಷಕ ವೃತ್ತಿಯೇ ಹಾಗೇ. ಒಂದಿಷ್ಟು ಮುಗ್ಧ ಮನಸ್ಸುಗಳ ನಿಷ್ಕಲ್ಮಶ ಪ್ರೀತಿ ಸಂಪಾದಿಸುತ್ತದೆ. ಇಂತಹ ಪ್ರೀತಿಗೆ ಬಸವಣ್ಣ ಕರ್ಮಭೂಮಿ ಸಾಕ್ಷಿಯಾಗಿದೆ.ಶರಣು ಎಂಬವರು ಹತ್ತರ್ಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12 ವರ್ಷದಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚಿಗೆ ಅವರಿಗೆ ಕಲುಬುರಗಿಗೆ ವರ್ಗಾವಣೆಯಾಗಿತ್ತು. ಹೀಗಾಗಿ ಹತ್ತರ್ಗಾ ಶಾಲೆಯ ಮಕ್ಕಳು ತಮ್ಮ ಪ್ರೀತಿಯ ಶಿಕ್ಷಕರನ್ನು ಒಲ್ಲದ ಮನಸ್ಸಿನಲ್ಲಿ ಬೀಳ್ಕೊಟ್ಟಿದ್ದಾರೆ.ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತ್ತೆ’ ಹಾಡಿಗೆ ತಮ್ಮದೆ ಶೈಲಿಯಲ್ಲಿ ಪದ ರಚನೆ ಮಾಡಿ ಹಾಡೊಂದನ್ನು ರಚಿಸಿದ್ದಾರೆ. ಜೊತೆಗೆ ಸನ್ಮಾನ ಮಾಡಿ ಪೆನ್ನು, ಗಡಿಯಾರ, ಸೇರಿದಂತೆ ಗುರು ಕಾಣಿಕೆ ಎಂಬಂತೆ ತಮ್ಮ ಉಡುಗೊರೆ ನೀಡಿದ್ದಾರೆ.ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹತ್ತರ್ಗಾ ಶಾಲೆಯ ವಿದ್ಯಾರ್ಥಿಗಳ ಈ ರೀತಿ ಗುರು ಪ್ರೀತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳ ಪ್ರೀತಿ ಕಂಡು ಶಿಕ್ಷಕ ಶರಣು ಭಾವುಕರಾಗಿದ್ದು, ಗುರುವಿನ ಸ್ಥಾನಕ್ಕೆ ಗೌರವ ಸಿಕ್ಕಂತ್ತಾಗಿದೆ.Sign in to your account
Username or Email Address


Password

 Remember Me


