ನೆಲಮಂಗಲ: ಒಂದು ಪಿಡಿಒ ಹುದ್ದೆಗೆ ಮೂವರು ಕಿತ್ತಾಟ ನಡೆದ ಘಟನೆ ಡಾಬಸ್ ಪೇಟೆ ಪಂಚಾಯತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ವರ್ತನೆಗೆಯನ್ನು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೈಗಾರಿಕಾ ಪಂಚಾಯತಿಯಾದ ಡಾಬಸ್ ಪೇಟೆಯಲ್ಲಿ, ಪಂಚಾಯತಿ ಸದಸ್ಯರು ಮೌನ ಪ್ರತಿಭಟನೆ ನಡೆಸಿದ್ದಾರೆ.ಗ್ರಾಮ ಪಂಚಾಯತಿ ಪಿಡಿಒಗಳಾದ ದಿನೇಶ್ ಮತ್ತು ರವೀಂದ್ರ ಬೇಡ ಎಂದು ಗ್ರಾಮ ಪಂಚಾಯತಿ ಸದಸ್ಯರು ಸ್ಥಳೀಯ ಶಾಸಕ ಕೆ.ಶ್ರೀನಿವಾಸಮೂರ್ತಿ ಅವರಿಗೆ ಒತ್ತಾಯ ಮಾಡಿದ್ದರು. ಈ ಹಿಂದೆ ಪಿಡಿಒ ಆಗಿದ್ದ ದಿನೇಶ್ ಕುಮಾರ್ ಗೆ ವರ್ಗಾವಣೆಯಾಗಿದ್ದು, ಅವರು ಹುದ್ದೆಯನ್ನು ತೆರವು ಮಾಡಿಲ್ಲ.ಇತ್ತ ಇದೇ ಹುದ್ದೆಗೆ ನೇಮಕವಾಗಿರುವ ರವೀಂದ್ರ ಅವರು ಮೇಲೆ, ಅವರು ಈ ಹಿಂದೆ ಕಾರ್ಯನಿರ್ವಹಿಸಿದ್ದ ಪಂಚಾಯತಿಯಲ್ಲಿ ಅಕ್ರಮದ ಆರೋಪ ಹೇಳಿ ಬಂದಿತ್ತು. ಆದ್ದರಿಂದ ಈ ಇಬ್ಬರು ನಮಗೆ ಬೇಡ ಎಂದು ಪಂಚಾಯಿತಿ ಸದಸ್ಯರು ಒತ್ತಾಯ ಮಾಡಿದ್ದರು. ಅಲ್ಲದೇ ತಾತ್ಕಾಲಿಕವಾಗಿ ಬೇರೆ ಪಿಡಿಓ ನೇಮಕಾತಿಗೆ ಜಿಲ್ಲಾ ಪಂಚಾಯತಿ ಸಿಇಒಗೆ ಒತ್ತಾಯಿಸಿದರು. ಇತ್ತ ಗ್ರಾಮ ಪಂಚಾಯತಿ ಸದಸ್ಯರಾದ ಜೆಡಿಎಸ್ ಮತ್ತು ಬಿಜೆಪಿ ಬಣದ ನಡುವೆ ಕಿತ್ತಾಟ ನಡೆದಿದೆ. ಅಲ್ಲದೇ ಪಿಡಿಒ ಸ್ಥಾನಕ್ಕೆ ನಿರಂಜನಮೂರ್ತಿ ಎಂಬ ಅಧಿಕಾರಿಯ ಹೆಸರು ಕೇಳಿ ಬರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.ಇದೇ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಕೆ.ಶ್ರೀನಿವಾಸಮೂರ್ತಿ, ಪಿಡಿಒಗಳ ಹಗ್ಗಾಜಗ್ಗಾಟ ಸಂಗತಿ ನನಗೂ ತಿಳಿದು ಬಂದಿದೆ. ಇಂದು ಎಲ್ಲಾ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಸದಸ್ಯರು ಪಿಡಿಒ ಅಧಿಕಾರಿಯಾಗಿ ಹೊಸಬರನ್ನು ನೇಮಿಸಲು ಒತ್ತಾಯಿಸಿದ್ದಾರೆ. ಅದರಂತೆಯೇ ಮುಂದಿನ ದಿನಗಳಲ್ಲಿ ತಾತ್ಕಾಲಿಕ ಪಿಡಿಒ ನೇಮಕಾತಿಗೆ ಒತ್ತಾಯಿಸಲಿದ್ದೇವೆ ಎಂದರು. ಈ ವೇಳೆ ಸೋಂಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಿ ಆಂಜನಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಇಂದ್ರಮ್ಮ, ಶ್ರೀನಿವಾಸಮೂರ್ತಿ, ಚಂದ್ರಣ್ಣ, ಪುರುಷೋತ್ತಮ್, ವಿ.ಎಸ್.ಎಸ್.ಎನ್.ವೆಂಕಟೇಶ್ ಹಾಜರಿದ್ದರು.Sign in to your account
Username or Email Address


Password

 Remember Me


