ಯಾದಗಿರಿ: ಜಿಲ್ಲೆಯ ಶಹಾಪುರನಲ್ಲಿ ಸಗರನಾಡು ಉತ್ಸವ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಿತು.ಚರಬಸವೇಶ್ವರ ಸಂಗೀತ ಸೇವಾ ಸಮಿತಿ ವತಿಯಿಂದ ಶಹಾಪುರದ ಚರಬಸವೇಶ್ವರ ಮಂದಿರದ ಆವರಣದಲ್ಲಿ 22ನೇ ವರ್ಷದ ಸಗರನಾಡು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗದಗನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪಂಚಾಕ್ಷರಿ ಕಲ್ಯಯ್ಯ ಅಜ್ಜನವರು ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಲ್ಯಯ್ಯ ಅಜ್ಜನವರಿಗೆ ತುಲಾಬಾರ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಕಲ್ಲಯ್ಯ ಅಜ್ಜನವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.ಈ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಹಿರಿಯ ಕಲಾವಿದ ವೈಜ್ಯನಾಥ ಬಿರಾದರ, ಜ್ಯೂನಿಯರ್ ಸಾಧು ಕೋಕಿಲ, ಶಕ್ತಿಕುಮಾರ್, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ದಸ್ತೆ ಕಾಮಿಡಿ ಝಲಕ್ ನೋಡುಗರಿಗೆ ಸಖತ್ ಮನರಂಜಿಸಿತು. ಬಸವರಾಜ್ ವರವಿ ನೃತ್ಯ ಕಾರ್ಯಕ್ರಮ ನೋಡುಗರಿಗೆ ಖುಷಿ ನೀಡಿತು.ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ವಿವಿಧ ಕ್ಷೇತ್ರದ ಸೇವೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಒಟ್ಟಿನಲ್ಲಿ ಸಗರನಾಡು ಉತ್ಸವ ಸಗರನಾಡಿನಲ್ಲಿ ಅದ್ಧೂರಿಯಾಗಿ ಜರುಗಿತು.Sign in to your account
Username or Email Address


Password

 Remember Me


