ಮೈಸೂರು: ಪೇಜಾವರ ಶ್ರೀಗಳ ನಿಧನಕ್ಕೆ ಮಾಜಿ ಸಚಿವ ಎಚ್. ವಿಶ್ವನಾಥ್ ಮೈಸೂರಿನಲ್ಲಿ ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳು ಸರ್ವಜನ ಪ್ರೇಮಿ ಸಂತ. ಭಾರತದ ಉದ್ದಗಲದಲ್ಲು ಅವರ ಹೆಸರಿದೆ. ಅವರ ನಿಧನ ತುಂಬಲಾರದ ನಷ್ಟ ಎಂದು ಅವರು ತಿಳಿಸಿದ್ದಾರೆ.ಕನಕದಾಸರ ಬಗ್ಗೆ ಅವರು ಅಪಾರ ಅಧ್ಯಯನ ಮಾಡಿದ್ದರು. ಕನಕಪೀಠ ವಿವಾದವಾದಾಗ ಬೆಂಗಳೂರು ಪ್ರಸ್ ಕ್ಲಬ್‍ಗೆ ಬಂದಿದ್ದರು. ವಿವಾದದ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕು ಎಂದು ಜನರ ಮುಂದೆ ಬಂದಿದ್ದರು. ಆಗ ನಾನು ಇಲ್ಲಿಗೆ ನೀವು ಬರಬಾರದಿತ್ತು ಎಂದು ಮನವಿ ಮಾಡಿದ್ದೆ. ಆದರೂ ಅವರು ನನ್ನೊಂದಿಗೆ ಪ್ರಸ್ ಕ್ಲಬ್‍ನಲ್ಲಿ ಚರ್ಚೆ ಮಾಡಿದ್ದರು. ತಳಸ್ಪರ್ಶಿ ಸಮುದಾಯಕ್ಕೆ ಅವರು ಕೆಲಸ ಮಾಡಿದ್ದರು. ಹಿಂದೂ ಧರ್ಮದಲ್ಲಿದ್ದರೂ ಮುಸ್ಲಿಂರನ್ನು ಗೌರವಿಸಿದ್ದರು ಎಂದು ವಿಶ್ವನಾಥ್ ಶ್ರೀಗಳನ್ನು ನೆನಪಿಸಿಕೊಂಡಿದ್ದಾರೆ.ನಿಮಗೆ ಗೊತ್ತಿದೇಯೋ ಇಲ್ಲವೋ ಅವರ ಕಾರು ಚಾಲಕ ಒಬ್ಬ ಮುಸ್ಲಿಂ ಆಗಿದ್ದಾನೆ. ನಾವು ಅಂದರೆ ಅವರಿಗೆ ಪ್ರೀತಿ. ನಮಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಬೇಕು ಎಂದು ಅಮಿತ್ ಷಾಗೆ ದೂರವಾಣಿ ಮಾಡಿದ್ದರು. ರಾಜಕಾರಣಿಗಳೆಂದರೆ ಅವರಿಗೆ ಮುಲಾಜಿಲ್ಲ. ಅವರಿಗೆ ಇದ್ದದ್ದು ದೇವರ ಮುಲಾಜು ಮಾತ್ರ ಎಂದು ಹೇಳಿದರು. ಇದನ್ನು ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವುನಾವು ಪ್ರಜಾತಂತ್ರವಾದಿಗಳು ಅನ್ನೋದು ಅವರ ನಂಬಿಕೆಯಾಗಿತ್ತು. ರಾಜಕಾರಣಿ ಮತ್ತು ಒಬ್ಬ ಸಂತ ಇಬ್ಬರು ಕೂಡ ಸಾಮಾಜಿಕ ಜವಾಬ್ದಾರಿಯಲ್ಲಿ ಸಮಾನರು ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅವರೆಂದರೆ ನನಗೆ ಗೌರವ ಎಂದು ತಿಳಿಸಿದ್ದಾರೆ.Sign in to your account
Username or Email Address


Password

 Remember Me


