ಧಾರವಾಡ: ಪೇಜಾವರ ಶ್ರೀಗಳು ರಾಜ್ಯದಲ್ಲೇ ಮೊದಲ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ್ದು ವಿದ್ಯಾನಗರಿ ಧಾರವಾಡದಲ್ಲಿ.1955 ರಲ್ಲಿ ನಗರದ ರಾಯರಮಠದ ಬಳಿ ಇರುವ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ್ದ ಶ್ರೀಗಳು, ಅದಕ್ಕೆ ಪ್ರಹ್ಲಾದ ವಿದ್ಯಾರ್ಥಿ ನಿಲಯ ಎಂದು ಹೆಸರು ಕೊಟ್ಟಿದ್ದರು. ಇನ್ನು ಅವರು ಧಾರವಾಡಕ್ಕೆ ಬಂದಾಗ ಇದೇ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಆತ್ಮೀಯರಾದವರು ಎಲ್ಲರೂ ಅವರನ್ನು ವಸತಿ ನಿಲಯದಲ್ಲೇ ಬಂದು ಭೇಟಿ ಮಾಡುತ್ತಿದ್ದರು.ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಈ ವಸತಿ ನಿಲಯ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಸಂಧ್ಯಾವಂದನೆ, ಪ್ರವಚನ, ಸಂಸ್ಕಾರಗಳನ್ನು ಬೋಧನೆ ಮಾಡಲಾಗುತ್ತೆ. ಈ ವ್ಯವಸ್ಥೆ ಮಾಡಿದ್ದಕ್ಕಾಗಿಯೇ ಇಲ್ಲಿ ಹಲವು ವಿದ್ಯಾರ್ಥಿಗಳು ಸಮಾಜದ ಎಲ್ಲ ರೀತಿಯ ನಿಯಮಗಳನ್ನು ಹಾಗೂ ಧಾರ್ಮಿಕವಾಗಿ ಒಳ್ಳೆಯ ಸಂಸ್ಕಾರಗಳನ್ನು ಕಲಿತಿದ್ದಾರೆ ಎಂದು ಅಲ್ಲಿಯೇ ಅಭ್ಯಾಸ ಮಾಡುವ ವಿದ್ಯಾರ್ಥಿ ಅಕ್ಷಯ ಭಟ್ಟ ಹೇಳಿದ್ದಾರೆ.ಇನ್ನು ಈ ವಸತಿ ನಿಲಯದ ಅಧ್ಯಕ್ಷರಾಗಿರುವ ಡಾ. ಕವಲಗುಡ್ಡ ಅವರು, ಪೇಜಾವರ ಶ್ರೀಗಳಿಗೆ ಈ ವಸತಿ ನಿಲಯ ಸ್ಥಾಪನೆ ಮಾಡಲು ಜಮೀನನ್ನು ಕೊಡಲಾಗಿತ್ತು. ಆದರೆ ಕಳೆದ 2002 ರಲ್ಲಿ ಹಳೆಯ ಕಟ್ಟಡ ಕೆಡವಿ, ಹೊಸ ಕಟ್ಟಡ ಕಟ್ಟಲು 39 ಲಕ್ಷ ರೂ. ಹಣವನ್ನು ನೀಡಿದ್ದರು ಎಂದು ತಿಳಿಸಿದ್ದರು. ಇದೇ ವೇಳೆ ವಸತಿ ನಿಲಯದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪ್ರಹ್ಲಾದ ಅವರು ಮಾತನಾಡಿ, ಶ್ರೀಗಳನ್ನು ನಾವು ಕಳೆದುಕೊಂಡಿದ್ದು ದೊಡ್ಡ ದುರಂತ ಎಂದು ಹೇಳಿದರು. ಇನ್ನು ಅವರು ಧಾರವಾಡಕ್ಕೆ ಬಂದಾಗ ಸದಾ ಈ ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿಗಳಿಗೆ ಕೆಲ ವಿಷಯಗಳ ಆಚಾರ ವಿಚಾರ ತಿಳಿಸುತ್ತಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು.Sign in to your account
Username or Email Address


Password

 Remember Me


