ಬೆಂಗಳೂರು: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಲಕ್ಷಾಂತರ ಭಕ್ತರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.ಈ ಕುರಿತು ಪ್ರಧಾನಿ ಮೋದಿ ಎರಡು ಟ್ವೀಟ್ ಮಾಡಿದ್ದು, ತಾವು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಹಾಗೂ ಅವರೊಂದಿಗೆ ಕಳೆದ ಸಂದರ್ಭಗಳನ್ನೂ ನೆನೆದಿದ್ದಾರೆ. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಾದಿಂದಾಗಿ ಅವರಿಂದ ಕಲಿಯಲು ನನಗೆ ಹಲವು ಅವಕಾಶ ಸಿಕ್ಕಿದ್ದವು. ಗುರು ಪೂರ್ಣಿಮೆಯ ದಿನದಂದು ನಮ್ಮ ಇತ್ತೀಚಿನ ಭೇಟಿ ಕೂಡ ಸ್ಮರಣೀಯವಾಗಿತ್ತು. ಅವರ ಜ್ಞಾನವು ಯಾವಾಗಲು ಎದ್ದು ಕಾಣುತಿತ್ತು. ಶ್ರೀಗಳ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂದೇಶವಿದೆ ಎಂದು ನೆನೆದಿದ್ದಾರೆ.I consider myself blessed to have got many opportunities to learn from Sri Vishvesha Teertha Swamiji. Our recent meeting, on the pious day of Guru Purnima was also a memorable one. His impeccable knowledge always stood out. My thoughts are with his countless followers. pic.twitter.com/sJMxIfIUSS— Narendra Modi (@narendramodi) December 29, 2019ಎರಡನೇ ಟ್ವೀಟಿನಲ್ಲಿ, ಪೇಜಾವರ ಶ್ರೀಗಳು ಸೇವೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರ ಬಿಂದುವಾಗಿದ್ದರು. ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ. ಅವರ ಸೇವೆ ಹಾಗೂ ಆಧ್ಯಾತ್ಮಿಕ ಶಕ್ತಿಯ ಮೂಲಕ ನ್ಯಾಯಯುತ ಮತ್ತು ಸಹಾನುಭೂತಿ ಸಮಾಜಕ್ಕಾಗಿ ನಿರಂತರ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ನೆನೆದಿದ್ದಾರೆ. ಅಲ್ಲದೆ ಕೊನೆಯದಾಗಿ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


