ಮಡಿಕೇರಿ: ಕೊಡಗು ಜಿಲ್ಲೆ ಪೊಲೀಸ್ ಇಲಾಖಾ ವತಿಯಿಂದ ನಾಗರಿಕರಿಗೆ ಬಂದೂಕು ಉಪಯೋಗದ ಬಗ್ಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೋಪ್ಪದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.ಈ ತರಬೇತಿಯನ್ನು ಮುಖ್ಯವಾಗಿ ಬಂದೂಕನ್ನು ಅಪಾಯವಿಲ್ಲದೆ ಬಳಸುವ ಬಗ್ಗೆ ಹಾಗೂ ಅದರ ನಿರ್ವಹಣೆಯ ಬಗ್ಗೆ, ನಾಗರಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಹೆಚ್ಚಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಬಂದೂಕಿನಿಂದ ಸಂಭವಿಸಬಹುದಾದ ಅನಾಹುತಗಳು ಮತ್ತು ಅಪರಾಧಗಳು ನಡೆಯದಂತೆ ಮುಂಜಾಗೃತಾ ಕ್ರಮಗಳ ಬಗ್ಗೆ ತರಬೇತಿಯಲ್ಲಿ ತಿಳಿಸಲಾಗುತ್ತಿದೆ.ತುರ್ತು ಪರಿಸ್ಥಿತಿಯಲ್ಲಿ ಸದರಿ ತರಬೇತಿ ಪಡೆದ ನಾಗರಿಕರನ್ನು ಪೊಲೀಸರೊಂದಿಗೆ ಸಹಾಯಕರಾಗಿ ಬಳಸಲು ಸಹಾಯಕಾರಿಯಾಗಿದೆ. ಹೊಸದಾದ ಬಂದೂಕು ಪರವಾನಗಿಯನ್ನು ಪಡೆಯಲು ಈ ತರಬೇತಿಯ ಅವಶ್ಯಕತೆ ಇರುತ್ತದೆ. ಈ ತರಬೇತಿಯಲ್ಲಿ ಒಟ್ಟು 59 ಜನ ಗೋಣಿಕೊಪ್ಪದ ಸುತ್ತಮುತ್ತಲಿನ ನಾಗರಿಕರು ಭಾಗವಹಿಸಿದ್ದು, ಅವರ ಪೈಕಿ 8 ಮಂದಿ ಮಹಿಳೆಯರಾಗಿದ್ದಾರೆ. ಹೀಗಾಗಿ ಮಹಿಳೆಯರು ಬಂದೂಕು ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ.ಈ ಬಂದೂಕು ತರಬೇತಿ ಶಿಬಿರ ಅನುಕೂಲವಾಗಿದೆ. ತೋಟದ ಮನೆಯಲ್ಲಿ ಒಂಟಿಯಾಗಿ ಮಹಿಳೆಯರು ಇದ್ದ ಸಂದರ್ಭ ಅಪಾಯ ಎದುರಾದಲ್ಲಿ ಮನೆಯಲ್ಲಿರುವ ಬಂದೂಕನ್ನು ಬಳಸುವ ಅವಕಾಶ ಈ ತರಬೇತಿಯಲ್ಲಿ ಲಭ್ಯವಾಗಿದೆ ಎಂದು ಮಹಿಳೆಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.ಶಿಬಿರದಲ್ಲಿ ಪುರುಷರು ಸೇರಿದಂತೆ ಒಟ್ಟು 59 ಜನರು ಭಾಗವಹಿಸಿದ್ದಾರೆ. ಈ ತರಬೇತಿಯನ್ನು ಡಿ.ಎ.ಆರ್. ಘಟಕದ ಆಯುಧಗಾರದ ನಿರ್ವಾಹಕರಾದ ಎಸ್.ಕೆ. ವೆಂಕಪ್ಪ,ಅವರ ನೇತೃತ್ವದಲ್ಲಿ ಬಂದೂಕು ಶಿಬಿರ ನಡೆಸಲಾಗುತ್ತಿದೆ.






 Advertisement 




Sign in to your account
Username or Email Address


Password

 Remember Me


