ಚಾಮರಾಜನಗರ: ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಜಿಲ್ಲೆಯಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟವನ್ನ ಬೆಸೆಯುವ ಸೇತುವೆಯಂತಿರುವ, ವನ್ಯಜೀವಿ ಪ್ರಿಯರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಬಂಡೀಪುರದಲ್ಲಿ ವರ್ಚಾಚರಣೆಗೆ ಬ್ರೇಕ್ ಬಿದ್ದಿದೆ.ವರ್ಷಾಂತ್ಯದಲ್ಲಿ ಬಂಡೀಪುರ ಅರಣ್ಯದಲ್ಲಿ ಸಮಯ ಕಳೆಯುವ ಕಾರಣ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇರುವ ಕಾಟೇಜ್ಸ್ ಬುಕ್ ಮಾಡುತ್ತಿದ್ದು, ಈಗಾಗಲೇ ಎಲ್ಲಾ ಕಾಟೇಜ್ ಬುಕ್ ಆಗಿದೆ. ಅರಣ್ಯದ ಮಧ್ಯೆ ಹೊಸ ವರ್ಷಾಚರಣೆ ಮಾಡಲು ಆಗಮಿಸುವವರಿಗೆ ಕಠಿಣ ಕಾನೂನು ಎದುರಿಸಬೇಕಾಗದ ಎಚ್ಚರಿಕೆಯನ್ನು ಅರಣ್ಯ ಇಲಾಖೆ ಪ್ರವಾಸಿಗರಿಗೆ ಹೇಳಿದೆ.ಹೊಸ ವರ್ಷಾಚರಣೆಗೆ ಇನ್ನೂ 1 ವಾರ ಇರುವಾಗಲೇ ಬಂಡೀಪುರ ಮತ್ತು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರುವ ವಸತಿಗೃಹಗಳು ಹೌಸ್ ಫುಲ್ ಆಗಿವೆ. ಇಡೀ ದೇಶದಲ್ಲಿಯೇ ಒಂದೇ ಜಿಲ್ಲೆಯಲ್ಲಿ 2 ಹುಲಿ ಸಂರಕ್ಷಿತ ಪ್ರದೇಶ, 2 ವನ್ಯಜೀವಿ ವಿಭಾಗಗಳಿದ್ದು, ಹೀಗಾಗಿ ಚಾಮರಾಜನಗರ ಜಿಲ್ಲೆಯ ದೇಶದಲ್ಲಿಯೇ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ.ಬಂಡೀಪುರದಲ್ಲಿ ಇರುವ ಕೋಕಿಲ, ವನಸುಮ, ವನಸಿರಿ, ವನ ರಂಜಿನಿ ಮತ್ತು ಅತಿಗಣ್ಯ ವ್ಯಕ್ತಿಗಳಿಗೆ ಮೀಸಲಾಗಿರುವ ಗಜೇಂದ್ರ ವಸತಿಗೃಹ ಕೂಡ ಬುಕ್ಕಿಂಗ್ ಆಗಿದೆ. ಹಸಿರು ಕಾನನದ ಮಧ್ಯೆ ಇರುವ ಕಾಟೇಜ್ಸ್ ಆಕರ್ಷಣೀಯವಾಗಿರುವುದು ಒಂದು ಕಡೆಯಾದರೆ, ಬೆಳಗ್ಗೆ ಮತ್ತು ಸಂಜೆ ವೇಳೆ ವನ್ಯಜೀವಿಗಳನ್ನ ನೋಡುವ ಭಾಗ್ಯ ಪ್ರವಾಸಿಗರಿಗೆ ಸಿಗಲಿದೆ. ಹೀಗಾಗಿ ಕಳೆದ ವರ್ಷ ಕಾಟೇಜ್ ಬುಕ್ ಮಾಡಲು ಹೋಗಿ ಸಿಗದೇ ಇದ್ದವರು ಈ ಬಾರಿ ಒಂದು ತಿಂಗಳ ಮುಂಚೆಯೇ ಬುಕ್ ಮಾಡಿದ್ದಾರೆ.ನವೆಂಬರ್ ತಿಂಗಳ ಅಂತ್ಯದವರೆಗೂ ಸುರಿದ ಮಳೆ ಇಡೀ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ಅಲ್ಲದೇ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿಯೇ ಬಂಡೀಪುರ ಇರುವುದರಿಂದ ತಮಿಳುನಾಡಿನ ಊಟಿ, ಕೇರಳ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಸಾಗರೋಪಾದಿ ಬರುತ್ತಿದ್ದಾರೆ. ನೂತನ ವರ್ಷಾಚರಣೆಗೆ ಮಹಾರಾಷ್ಟ್ರ, ಒರಿಸ್ಸಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಲಿದ್ದಾರೆ. ಬರುವ ಪ್ರವಾಸಿಗರಿಗೆ ಸಫಾರಿಗೆ ನಿರಾಸೆಯಾಗಂತೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದೆ.ವರ್ಷಾಂತ್ಯದ ವೇಳೆ ಬರುವ ಪ್ರವಾಸಿಗರನ್ನ ಸ್ವಾಗತಿಸಲು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಅದೇ ರೀತಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಬಿಳಿರಿಗಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ಅತೀ ಸೂಕ್ಷ್ಮವಾದ ಪ್ರದೇಶ. ಬಿಆರ್ ಟಿ ಹುಲಿ ಸಂರಕ್ಷಿತ ಮಧ್ಯೆ ಕ್ಯಾತೇ ದೇವರ ಗುಡಿ ಮತ್ತು ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ಅರಣ್ಯ ಇಲಾಖೆ ಸೇರಿದ ವಸತಿ ಗೃಹಗಳಿವೆ. ಒಟ್ಟು 8 ಕಾಟೇಜ್ಸ್ ಇದ್ದು, ಎಲ್ಲವೂ ಕೂಡ ಸಂಪೂರ್ಣವಾಗಿ ಭರ್ತಿಯಾಗಿವೆ. ಬರುವ ಪ್ರವಾಸಿಗರು ಹೊಸ ವರ್ಷ ಸ್ವಾಗತ ಮಾಡುತ್ತೇವೆ. ಬರುವ ಪ್ರವಾಸಿಗರು ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವುದು ಖಚಿತ. ವಸತಿಗೃಹ ಪಡೆದ ಪ್ರವಾಸಿಗರು ಇತಿಮಿತಿಯಲ್ಲಿ ಇರಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.Sign in to your account
Username or Email Address


Password

 Remember Me


