ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗಾಣಲು ಕೌಂಟ್ ಡೌನ್ ಶುರುವಾಗಿದೆ. ಇದೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಶ್ರೀಮನ್ನಾರಾಯಣನ ಹವಾ ಜೋರಾಗಿದೆ. ಅಷ್ಟಕ್ಕೂ ಆರಂಭದಿಂದ ಇಲ್ಲಿಯವರೆಗೂ ಈ ಸಿನಿಮಾ ಬಗ್ಗೆ ಕಾಲ ಕಾಲಕ್ಕೆ ಒಂದಷ್ಟು ಚರ್ಚೆಗಳು ಚಾಲ್ತಿಯಲ್ಲಿದ್ದುಕೊಂಡು ಆ ಮೂಲಕವೇ ಕುತೂಹಲವೊಂದು ಸದಾ ಚಾಲ್ತಿಯಲ್ಲಿದೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರದ ಕೌಂಟ್ ಡೌನ್ ಕ್ರೇಜ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಕಡೇಯ ಕ್ಷಣಗಳನ್ನು ಪ್ರೇಕ್ಷಕರೆಲ್ಲ ಸೋಶಿಯಲ್ ಮೀಡಿಯಾ ಮೂಲಕ ಸಂಭ್ರಮಿಸುತ್ತಿದ್ದಾರೆ.ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಬಿಗ್ ಬಜೆಟ್ಟಿನ ಚಿತ್ರ. ಈ ವಾರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದರೂ ಇಷ್ಟರಲ್ಲಿಯೇ ಮಿಕ್ಕ ನಾಲಕ್ಕು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಬಿಡುಗಡೆಯಾಗಲಿದ್ದಾನೆ. ಈ ಘಳಿಗೆಯಲ್ಲಿ ಶ್ರೀಮನ್ನಾರಾಯಣನ ಬರುವಿಕೆಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದರೊಂದಿಗೆ ಶ್ರೀಮನ್ನಾರಾಯಣನ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಮಡುಗಟ್ಟಿಕೊಂಡಿರೋ ಕ್ಯೂರಿಯಾಸಿಟಿ ಮತ್ತಷ್ಟು ತೀವ್ರವಾಗಿ ಬಿಟ್ಟಿದೆ.ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರದರ್ಶಿಸುತ್ತಿರುವ ವಿಭಿನ್ನವಾದ ಪ್ರಚಾರದ ಪಟ್ಟುಗಳಂತೂ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಸರ್ವವ್ಯಾಪಿಯಾಗಿಸುತ್ತಿವೆ. ಸಿನಿಮಾ ಪ್ರಚಾರದ ವಿಚಾರದಲ್ಲಿಯೂ ಒಂದಷ್ಟು ಸಿದ್ಧ ಸೂತ್ರಗಳಿವೆ. ಪುಷ್ಕರ್ ಅದೆಲ್ಲದರಾಚೆಗೆ ಪ್ರತಿಯೊಬ್ಬರೂ ಶ್ರೀಮನ್ನಾರಾಯಣನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲು ಅವರು ಅವನೇ ಶ್ರೀಮನ್ನಾರಾಯಣ ಚಿತ್ರದ ಬೃಹತ್ ಕಟೌಟಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಇನ್ನು ಎಪ್ಪತ್ತೆರಡು ಗಂಟೆಗಳು ಮಾತ್ರ ಬಾಕಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೆ ಬಂದಿರೋ ಕಮೆಂಟುಗಳೇ ಶ್ರೀಮನ್ನಾರಾಯಣನ ಬಗ್ಗೆ ಅದೆಂಥಾ ಕ್ರೇಜ್ ಇದೆ ಎಂಬುದನ್ನು ಸಾರಿ ಹೇಳುವಂತಿದೆ. ಇಂಥಾ ಕೌಂಟ್‍ಡೌನ್ ಕ್ರೇಜ್ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೇರೆ ಮೀರಿಕೊಂಡಿದೆ.Sign in to your account
Username or Email Address


Password

 Remember Me


